Big NewsImportant
Trending

ಡಿವೈಡರ್ ಹಾರಿ ಅಡ್ಡ ಬಂದು ಬಸ್ಸಿಗೆ ಬಡಿದುಕೊಂಡ ಕಾರು: ಹೊಸ ವರ್ಷದ ಮೊದಲ ದಿನವೇ ನಾಲ್ವರ  ದುರ್ಮರಣ

ಹೆದ್ದಾರಿಯಲ್ಲಿ ನಡೆದ ಭೀಕರ ದುರಂತ

ಅಂಕೋಲಾ ; ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಘಟನೆ  ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಹತ್ತಿರ ನಡೆದಿದೆ.. ತಮಿಳುನಾಡು ಮೂಲದವರು ಎನ್ನಲಾದ  ಇವರು ಬಾಳೇ ಗುಳಿ ಕಡೆಯಿಂದ ಅಂಕೋಲಾ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ,,ಅದಾವುದೋ ಕಾರಣದಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ದಾಟಿ ವಿರುದ್ಧ ದಿಕ್ಕಿಗೆ ಜೋರಾಗಿ ಬಂದು , ಅಂಕೋಲಾ ಕಡೆಯಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ- ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೋರಾಗಿ ಗುದ್ದಿಕೊಂಡು 8-10 ಮೀಟರ್ ದೂರ ತಳ್ಳಲ್ಪಟ್ಟಿದೆ ಎನ್ನಲಾಗಿದ್ದು,ಕಾರು ಸಂಪೂರ್ಣ ಜಖಂ ಗೊಂಡು ನುಜ್ಜು ಗುಜ್ಜಾಗಿದೆ.

ಬೈಕ್ ಸಾಲ ತೀರಿಸಲು ದರೋಡೆಗೆ ಇಳಿದ ಯುವಕರು: ಶೋಕಿಗಾಗಿ ಕಳ್ಳತನದ ಕಸುಬು

ಬದುಕುಳಿದಿರ ಬಹುದೆಂದು ಕಾರನಲ್ಲಿದ್ದ ಒರ್ವನನ್ನು ಆಸ್ಪತ್ರೆಗೆ  ಸಾಗಿಸಲಾಗಿತ್ತಾದರೂ ಅವರು ಕೊನೆಯುಸಿರೆಳೆದಿದ್ದು, ಘಟನಾ ಸ್ಥಳದಲ್ಲಿ ಇನ್ನೀರ್ವರು  ಸಿಡಿದು ಬಿದ್ದು ಮೃತಪಟ್ಟಿದ್ದಾರೆ. . ಕಾರನಲ್ಲಿ ಡ್ರೈವಿಂಗ್ ಸೀಟ್ ಎಡ ಪಕ್ಕದಲ್ಲಿ ಕುಳಿತಿದ್ದ ಇನ್ನೋರ್ವ ನುಜ್ಜು ಗುಜ್ಜಾದ ಕಾರ್ ನಲ್ಲಿ ಸಿಲುಕಿ ಮೃತ್ ಪಟ್ಟಿದ್ದು ಪಿ ಎ ಸೈ ಪ್ರವೀಣ ಕುಮಾರ ಮತ್ತಿತರರು ಸ್ವತಃ ಕಬ್ಬಿಣದ ಸಲಾಕೆ ಬಳಸಿ ಡೋರ್ ಓಪನ್ ಮಾಡಿ ದೇಹ ಹೊರತೆಗೆದಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನ ಸಂಭವಿಸಿದ  ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರಂತ ಸಾವಿಗೀಡಾಗಿದ್ದು, ಮೃತರ ವಿಳಾಸ, ಎಲ್ಲಿಂದ ಎಲ್ಲಿಗೆ ಹೊರಟಿದ್ದರು., ಘಟನೆಗೆ ಕಾರಣಗಳೇನು ಎಂಬ ಕುರಿತು ಮಾಹಿತಿ ದೊರೆಯ ಬೇಕಿದೆ.

ಘಟನಾ ಸ್ಥಳಕ್ಕೆ  ಪೋಲೀಸ್ ಇಲಾಖೆಯ ಹಿರಿ- ಕಿರಿಯ ಅಧಿಕಾರಿಗಳು , 112 ಸಿಬ್ಬಂದಿಗಳು, ಐ ಆರ್ ಬಿ ಸಿಬ್ಬಂದಿಗಳು ಹಾಜರಾಗಿ ಸ್ಥಳೀಯರ ಸಹಕಾರದಲ್ಲಿ ಮೃತ್ ದೇಹಗಳನ್ನು ಸಾಗಿಸಲು ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ಅಧಿಕಾರಿಗಳು ಸ್ಥಳಕ್ಕೆ ಬಂದು, ಅಪಘಾತಗೊಂಡ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ (ಬಸ್ ) ಮಾಡಿ ಮುಂದಿನ ಪಯಣಕ್ಕೆ ಅನುವು ಮಾಡಿಕೊಟ್ಟರು ಕ್ರೇನ್ ಬಳಸಿ ನುಜ್ಜು ಗುಜ್ಜಾದ ಕಾರ್ ನ್ನು ಪಕ್ಕಕ್ಕೆ ಎಳೆದು ಹೆದ್ದಾರಿ ಸಂಚಾರಕ್ಕೆ ತೊಡಕಾಗದಂತೆ ಪೋಲಿಸರು ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ ಉದಯ ಕುಂಬಾರ ಸ್ಥಳ ಪರಿಶೀಲಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button