Follow Us On

WhatsApp Group
Important
Trending

ರಸ್ತೆಯಲ್ಲಿ ಸಹಾಯ ಯಾಚಿಸಿದರೂ ಯಾರೂ ಬರಲಿಲ್ಲ: ಕಾರು ಅಪಘಾತದಲ್ಲಿ ಓರ್ವನ ಸಾವು: ಮಾನವೀಯತೆ ಮೆರೆದ ಯುವಕ

ಅಪಘಾತ ನಡೆದ ಪ್ರದೇಶದಲ್ಲಿನ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದಾಗಿ ತಕ್ಷಣಕ್ಕೆ ಅಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗದೇ, ಸಹಾಯಕ್ಕಾಗಿ  ರಸ್ತೆಯಲ್ಲಿ ಸಾಗುತ್ತಿದ್ದ 3- 4 ವಾಹನಗಳಿಗೆ ಯಾಚಿಸಿದರೂ  ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ.

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ  ಅಂಕೋಲಾ- ಹುಬ್ಬಳ್ಳಿ ಮಾರ್ಗದ ಹೆಬ್ಬುಳ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ 2 ಕಾರಗಳ ನಡುವಿನ ಮುಖಾ ಮುಖಿ ಡಿಕ್ಕಿಯಲ್ಲಿ ಕಾರ್ ಚಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ..ಅದೃಷ್ಟವಶಾತ್ ಕಾರಿನಲ್ಲಿದ್ದ ಪುಟ್ಟ ಕಂದಮ್ಮ ಅಪಾಯದಿಂದ ಪಾರಾಗಿದ್ದಾಳೆ.

ಬಾಗಲಕೋಟ್ ಜಿಲ್ಲೆಯ ಜಮಖಂಡಿ ತಾಲೂಕಿನ ಮಹಾದೇವ ಹೊಸ್ಮನಿ (27) ಮೃತ ದುರ್ದೈವಿಯಾಗಿದ್ದು, ಈತನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪಿಎಚ್ ಡಿ ವಿದ್ಯಾರ್ಥಿಯಾಗಿದ್ದಾನೆ ಎನ್ನಲಾಗಿದ್ದು, ಬೆಳಗಾವಿ ಮತ್ತು ಬಾಗಲಕೋಟ ಮೂಲದ ಬೇರೆಬೇರೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಾಲ್ವರು ಸ್ನೇಹಿತರೊಂದಿಗೆ ಕಾರ್ ಚಲಾಯಿಸಿಕೊಂಡು ಧರ್ಮಸ್ಥಳ ಪ್ರವಾಸ ಮುಗಿಸಿ ಅಲ್ಲಿಂದ ಧಾರವಾಡಕ್ಕೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತಗೊಂಡ ಇನ್ನೊಂದು ಕಾರ್ ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಮೂಲದ ಕುಟುಂಬವೊಂದು ಗೋಕರ್ಣಕ್ಕೆ ತೆರಳುತ್ತಿದ್ದು, ಕಾರನಲ್ಲಿದ್ದ ಮಹಿಳೆ ತಲೆಗೆ  ಪೆಟ್ಟು ಬಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಅದೃಷ್ಟ ವಶಾತ್ ಪುಟ್ಟ ಕಂದಮ್ಮಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದ ತೀವ್ರತೆಗೆ 2 ಕಾರಗಳು ನುಜ್ಜು ಗುಜ್ಜಾಗಿದ್ದು ಇತರೆ ಪ್ರಯಾಣಿಕರಿಗೂ ಚಿಕ್ಕ – ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಮಾನವೀಯತೆ ಮೆರೆದ ಅಂಧ್ರದ ಯುವಕ – ಅಪಘಾತ ನಡೆದ ಪ್ರದೇಶದಲ್ಲಿನ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದಾಗಿ ತಕ್ಷಣಕ್ಕೆ ಅಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗದೇ, ಸಹಾಯಕ್ಕಾಗಿ  ರಸ್ತೆಯಲ್ಲಿ ಸಾಗುತ್ತಿದ್ದ 3- 4 ವಾಹನಗಳಿಗೆ ಯಾಚಿಸಿದರೂ  ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ.

ಈ ವೇಳೆ ಅದೇ ಮಾರ್ಗವಾಗಿ ಬೆಳಗಾವಿಯಿಂದ ಗೋಕರ್ಣಕ್ಕೆ ಬೈಕ್ ಮೂಲಕ ಹೊರಟಿದ್ದ ಆಂಧ್ರಪ್ರದೇಶದ ಕರ್ನೂಲ್ ನ ಯುವಕ ರವಿಪ್ರಕಾಶ ತನ್ನ ಬೈಕ್ ನಿಲ್ಲಿಸಿ, ತನ್ನೊಂದಿಗೆ ತಂದಿದ್ದ ಲಗೇಜ್ ಬ್ಯಾಗ್ ಗಳನ್ನು ಕೆಳಗಿಳಿಸಿ, ಕೋಮಾ ಸ್ಥಿತಿಯಲ್ಲಿದ್ದಂತೆ ಕಂಡು ಬಂದಿದ್ದ, ಮಹಾದೇವ ಹೊಸ್ಮನಿಯ ಜೀವರಕ್ಷಣೆ ಉದ್ದೇಶದಿಂದ, ಸ್ಥಳದಲ್ಲೇ ಇದ್ದ ಹೊಸ್ಮನಿಯ ಗೆಳೆಯನ   ಸಹಾಯಯಿಂದ ತನ್ನ ಬೈಕ್ ನಲ್ಲಿ  ಕುಳ್ಳಿರಿಸಿಕೊಂಡು ಘಟನಾ ಸ್ಥಳದಿಂದ  ಸುಮಾರು 45-50 . ಕಿ.ಮೀ ದೂರವಿದ್ದ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.   

ಸಿಪಿಐ ಕೃಷ್ಣಾನಂದ ನಾಯಕ ಮತ್ತು ಎ.ಎಸ್ಸೈ ದುರ್ಗಪ್ಪ ಕಲಘಟಗಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ, ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದರೂ ರಸ್ತೆಯಲ್ಲಿ ಯಾರೂ ಸಹಾಯದ ಬಾರದೆ ಇದ್ದಾಗ, ಈ ಯುವಕ ಮಾಡಿದ ಮಾನವೀಯ ನೆರವು ಮೆಚ್ಚುವಂಥದ್ದು. ತನ್ನ ವಾಹನದಲ್ಲೇ ಸುಮಾರು 50 ಕೀಲೋಮೀಟರ್ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಸಿಗುವಂತೆ ಮಾಡಿದ ಯುವಕ ನಿಜವಾಗಲು ಅಭಿನಂದನಾರ್ಹ. ಕಮೆಂಟ್ ಮಾಡಿ ಈತನನ್ನು ಅಭಿನಂದಿಸಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button