Follow Us On

WhatsApp Group
Important
Trending

ಶವವಾಗಿ ಪತ್ತೆಯಾದ ಯುವ ಪ್ರೇಮಿಗಳು: ಸೆಲ್ಫಿ ಹುಚ್ಚು, ಜೀವಕ್ಕೆ ತಂತು ಕುತ್ತು

ಜೋಯ್ಡಾ: ಸೆಲ್ಫಿ ತೆಗೆಯಲು ಹೋಗಿ ಪ್ರೇಮಿಗಳ ಜೋಡಿಯೊಂದು ಸೂಪಾ ಡ್ಯಾಂಗೆ ಬಿದ್ದು, ನಾಪತ್ತೆಯಾಗಿದ್ದರು. ಹುಡುಕಾಟದ ಬಳಿಕ ಜೋಡಿಯ ಮೃತದೇಹ ಪತ್ತೆಯಾಗಿದೆ. ಹೌದು, ಇಬ್ಬರು ಪ್ರೇಮಿಗಳು ದೂರದೂರಿನಿಂದ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದರು. ಈ ವೇಳೆ ಡ್ಯಾಮ್ ನ ಮುಂದುಗಡೆಯಿರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ತೆಗೆದಿದ್ದಾರೆ. ಇದೇ ಸೆಲ್ಫಿ ಹುಚ್ಚು, ಇದೀಗ ಅವರ ಜೀವನದ ಕೊನೆಯ ಸೆಲ್ಫಿಯಾಗಿದೆ.

ಮೃತ ವ್ಯಕ್ತಿಗಳನ್ನು ಬೀದರ್‌ನ ರಕ್ಷಿತಾ ಚಿದ್ರಿ ಮತ್ತು ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಡ್ಯಾಮ್ ವೀಕ್ಷಿಸಲು ಬಂದ ವೇಳೆ, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಜಾರಿ ನದಿಗೆ ಬಿದ್ದಿದ್ದರು. ಕಾಳಿ ನದಿಯಲ್ಲಿ ಬಿದ್ದಿದ್ದ ಜೋಡಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದರು. ಮುಳುಗು ತಜ್ಞರು, ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆಸಲಾಗಿತ್ತು. ಸದ್ಯ ಇಂದು ಬೆಳಗ್ಗೆ ಕಾಳಿ ನದಿಯಲ್ಲಿ ಜೋಡಿಗಳ ಮೃತದೇಹ ಪತ್ತೆಯಾಗಿದೆ.

ವಿವಿಧ ಭಂಗಿಯ ಸೆಲ್ಫಿ ತೆಗೆಯುವ ಭರದಲ್ಲಿ ಇಬ್ಬರೂ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದು, ಕೋಚ್ಚಿಕೊಂಡು ಹೋಗಿದ್ದಾರೆ. ಅಲ್ಲೆ ಇದ್ದ ಆಟೋ ಚಾಲಕ ಈ ಬಗ್ಗೆ ಮಾಹಿತಿ ನೀಡಿದ್ದ. ಮೃತಪಟ್ಟ ಯುವತಿ ರಕ್ಷಿತಾ, ಎಂಜಿನಿಯರ್ ವಿದ್ಯಾರ್ಥಿಯಾಗಿದ್ದಳು ಎಂದು ತಿಳಿದುಬಂದಿದೆ.

ಪ್ರಿಯ ಓದುಗರೆ, ಸೆಲ್ಫಿ, ಫೋಟೋ ತೆಗೆಯುವಾಗ ಎಚ್ಚರವಿರಲಿ. ಜೀವಕ್ಕೆ ಕುತ್ತು ತರುವ ಇಂಥ ಅಪಾಯಕಾರಿ ಸಾಹಸದಿಂದ ದೂರವಿರಿ. ಇಂಥ ಪ್ರಕರಣ ಪದೇ ಪದೇ ಕಣ್ಣೆದುರೆ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಮತ್ತು ಮಾದ್ಯಮಗಳು ಎಚ್ಚರಿಸುತ್ತಿದ್ದರೂ, ಕೆಲವರು ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಜೋಯ್ಡಾ

Back to top button