Follow Us On

WhatsApp Group
Important
Trending

ಟೋಲ್ ಗೇಟ್ ಪ್ರಕರಣದ 3 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು?ಷರತ್ತು ಪೂರ್ಣಗೊಳಿಸಿದ ನಂತರ ಬಿಡುಗಡೆ ? ಈ ವರೆಗೂ ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿ !?

ಅಂಕೋಲಾ: ಮಾರ್ಚ್ 29ರ ಹೋಳಿ ದಿನದಂದು ರಾ.ಹೆ 66ರ ಹಟ್ಟಿಕೇರಿ ಬಳಿ ಐ ಆರ್ ಬಿ ಟೋಲ್ ಪ್ಲಾಜಾ ಬಳಿ ನಡೆದ ಅಂಕೋಲಾ ಮೋಲೀಸ್ ಠಾಣಾ ಗುನ್ನ ಸಂಖ್ಯೆ 57/2021 (ಪ್ರಕರಣ)ಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಅಲಗೇರಿಯ ಮೂವರು ಆರೋಪಿತರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೇ 5ರಂದು ಷರತ್ತು ಬದ್ಧ ಜಾಮೀನು ನೀಡಿದೆ.                                                                                                                                

ಆಯ್ ಆರ್. ಬಿ  ಟೋಲ್ ಪ್ಲಾಜಾ ಬಳಿ ನಡೆದ ಈ ಘಟನೆಯ ವಿಡಿಯೋ  ತುಣುಕು ವೈರಲ್  ( ಎಎಸ್ಪಿ ಬದ್ರೀನಾಥ ಮೇಲೆ  ವಾಹನ ಹಾಯಿಸುವ ಯತ್ನ ) ಆದ ನಂತರ ಪ್ರಕರಣ ಗಂಭೀರತೆ ಪಡೆದು, ಘಟನೆ ನಡೆದ 2 ದಿನಗಳ ಬಳಿಕ  307 ಕೇಸ್ ದಾಖಲಾಗಿ ದೇಶದಾದ್ಯಂತ ಸುದ್ದಿ ಮಾಡಿತ್ತು.             

ಘಟನೆಗೆ ಸಂಬಂಧಿಸಿದಂತೆ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ನಡೆದ ಕೆಲ ಹೊತ್ತಿನಲ್ಲೇ   ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಬಿಳಿ ಸ್ಕಾರ್ಪಿಯೋ ವಾಹನ  ವಶಕ್ಕೆ ಪಡೆದಿದರು.                                                                                                   

ನಂತರ   ಪೊಲೀಸರು ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಪ್ರಾಪ್ತ ಬಾಲಕನನ್ನು ಬಾಲನ್ಯಾಯ ಮಂಡಳಿ ಎದುರು ಹಾಜರು ಪಡಿಸಿ, ನಂತರ ಮನೆಗೆ  ಕಳುಸಿಸಲಾಗಿತ್ತು. ಉಳಿದ ಮೂವರಿಗೆ  ನ್ಯಾಯಾಲಯವು 14 ದಿನಗಳ   ನ್ಯಾಯಾಂಗ ಬಂಧನಕ್ಕೆ ವಿದಿಸಿತ್ತು. ಬಳಿಕ ನ್ಯಾಯಾಂಗ ಬಂಧನ ಅವಧಿ ಮತ್ತೆ ಮತ್ತೆ ವಿಸ್ತರಣೆಗೊಂಡಿತ್ತು.       

ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (1), ಆರೋಪಿಗಳು ತಲಾ ಎರಡು ಸ್ಥಳೀಯ ಜಾಮೀನುದಾರರು ಮತ್ತು ತಲಾ 1 ಲಕ್ಷ ರೂ ಗಳಿಗೆ   ವೈಯಕ್ತಿಕ ಬಾಂಡ್ ನೀಡಬೇಕು, (2), ಆರೋಪಿಗಳು, ಮೇ 9 ರಿಂದ ಆರಂಭಿಸಿ ದೋಷಾರೋಪಣಾ ಪತ್ರ ಸಲ್ಲಿಸುವ ಕಾಲಾವಧಿವರೆಗೆ  ಪ್ರತಿ ಭಾನುವಾರ ತನಿಖಾಧಿಕಾರಿಗಳ ಎದುರು ಸಹಿ ಮಾಡಬೇಕು, ಇತ್ಯಾದಿ ಕೆಲ ಷರತ್ತುಗಳನ್ನು ವಿಧಿಸಿದೆ.                                                                                                             

ಆರೋಪಿಗಳು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅದೇಶದ ಪ್ರತಿಯನ್ನು ಕೆಳ ನ್ಯಾಯಾಲಯವಾದ ಅಂಕೋಲಾದ ಜೆ. ಎಂ.ಎಫ್ ಸಿ ನ್ಯಾಯಾಯಲಯದಲ್ಲಿ ಹಾಜರು ಪಡಿಸಿ, ಷರತ್ತನ್ನು ಪೂರ್ಣಗೊಳಿಸಿದ ನಂತರ  ಬಿಡುಗಡೆ ಗೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿದ್ದ ಓರ್ವ ಆರೋಪಿ ಈ ವರೆಗೂ ತಲೆಮರೆಸಿಕೊಂಡಿದ್ದು, ಘಟನೆ ನಡೆದು ತಿಂಗಳು ಕಳೆದರೂ ಪೊಲೀಸರಿಗೆ  ಆತನ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ !!?                       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button