Follow Us On

WhatsApp Group
Big News
Trending

ನದಿಯಲ್ಲಿ ಮುಳುಗಿದ್ದ ವೇಳೆ ಸಣ್ಣಗಿಡ ಹಿಡಿದುಕೊಂಡ ಜೀವ ಉಳಿಸಿಕೊಂಡ ವೃದ್ಧ: ಮೂರುದಿನದಿಂದ ಸಾವು ಬದುಕಿನ ಮಧ್ಯೆ ಹೋರಾಟ: ಬದುಕಿತು ಬಡಜೀವ

ಕಾರವಾರ: ಆ ವೃದ್ಧ ಕೋಣವನ್ನು ಹುಡುಕಿಕೊಂಡು ಮನೆಯಿಂದ ಹೊರಗೆ ಹೋಗಿದ್ದ. ಆದ್ರೆ, ಆಗಿದ್ದು ಮಾತ್ರ. ಕೋಣ ಹುಡುಕಿಕೊಂಡು ಹೊರಟ ವೃದ್ಧ ಮೂರುದಿನ ಕಳೆದರು ವಾಪಸ್ ಬಂದಿಲ್ಲ. ಮೊದಲೇ ಚಂಡಮಾರುತದ ಅಬ್ಬರ ಬೇರೆ. ಮನೆಯವರೆಲ್ಲರೂ ಏನಾಯ್ತು ಎಂಬ ಭಯದಲ್ಲೇ ಇದ್ದರು.

ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಚಂಡಮಾರತು ಹಲವಾರು ಅವಾಂತರ ಸೃಷ್ಟಿಸಿದೆ. ಹಲವರು ಮನೆ-ಮಠ ಕಳೆದುಕೊಂಡಿದ್ದಾರೆ. ಕೆಲ ರಸ್ತೆಗಳು ನೆಲಕಚ್ಚಿ ಹೋಗಿವೆ. ಮೀನುಗಾರಿಕಾ ಸಾಮಗ್ರಿಗಳು ಸಮುದ್ರಪಾಲಾಗಿವೆ.. ಹೀಗೆ ಚಂಡಮಾರುತ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಆದರೆ, ಈ ವೃದ್ಧನದ್ದು ಮಾತ್ರ ವಿಭಿನ್ನ ಕಥೆ.!

ಹೌದು, ಕಾರವಾರದ ವೆಂಕಟರಾಯ್ ಕೋಠಾರಕರ್ ಮೇ. 16 ರ ಸಂಜೆ ಕೋಣವನ್ನು ಹುಡುಕಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದ. ಆದರೆ ಸಂಜೆಯಾದರು ಮನೆಗೆ ಬಂದಿರಲಿಲ್ಲ. ಎಲ್ಲರೂ ಸೇರಿ ಹುಡುಕಾಡಿದ್ದಾರೆ. ಊರಿನಲ್ಲೂ ಈ ವಿಷಯ ಎಲ್ಲರಿಗೂ ತಿಳಿದು ಎರಡು ದಿನ ಎಲ್ಲ ಕಡೆ ಹುಡುಕಿದ್ದಾರೆ. ಆದರೆ, ವೃದ್ಧನ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ, ಮೂರುದಿನ ಆದರೂ ಪವಾಡ ಎಂಬoತೆ ವೃದ್ಧ ಬದುಕಿದ್ದಾನೆ.!

ಚಂಡಮಾರುತದ ಅಬ್ಬರದಿಂದಾಗಿ ಕಾಳಿ ನದಿಯ ಹಿನ್ನೀರಿನಲ್ಲಿ ಭಾಗಶ: ಮುಳುಗಿದ್ದ ವೃದ್ಧ. ಆದರೆ, ಸಣ್ಣದೊಂದು ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ. ಇದನ್ನು ಗ್ರಾಮಸ್ಥರು ಯಾರೋ ಗಮನಿಸಿದ್ದಾರೆ. ಹೀಗೆ ಮೂರು ದಿನದಿಂದ ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವೃದ್ಧನೋರ್ವ ಎಲ್ಲರೂ ಸೇರಿ ರಕ್ಷಿಸಿದ್ದಾರೆ. ಮೂರು ದಿನದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವೃದ್ಧ ಈಗ ಸಾವನ್ನೇ ಗೆದ್ದಿದ್ದಾನೆ.

ಮೂರುದಿನ ನೀರಿನಲ್ಲಿ ಇದ್ದರಿಂದ ವೃದ್ಧ ಅಸ್ವಸ್ಥನಾಗಿದ್ದಾನೆ. ಮೈ ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಸ್ವಸ್ಥರಾದ ಸ್ಥಿತಿಯಲ್ಲಿದ್ದ ವೃದ್ಧನನ್ನು ಮನೆಗೆ ಕರೆತಂದು ಆರೈಕೆ ಮಾಡಲಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕಾರವಾರ

Back to top button