Follow Us On

WhatsApp Group
Important
Trending

ಗಂಟಲಲ್ಲಿ ಶೇಂಗಾ ಸಿಲುಕಿ ಮಗು ಸಾವು: ದೇವರ ಮುಂದೆ ಮೃತದೇಹವಿಟ್ಟು ಘಂಟೆಯನ್ನು ಬಾರಿಸುತ್ತಾ ಮಗುವನ್ನು ಬದುಕಿಸು ಎಂದು ಮೊರೆ ಹೋದ ಅಜ್ಜಿ

ಯಲ್ಲಾಪುರ: ತಿನ್ನುತ್ತಿದ್ದ ಶೇಂಗಾ ಬೀಜ ಮಗುವಿನ ಗಂಟಲಲ್ಲಿ ಸಿಲುಕಿದೆ. ಕೂಡಲೇ ಮನೆಯವರು ಶೇಂಗಾ ಬೀಜವನ್ನು ತೆಗೆಯಲು ಪ್ರಯತ್ನಪಟ್ಟರು. ಆದರೂ ಅದು ಫಲಿಸಲಿಲ್ಲ. ಮಗು ಇಹಲೋಕ ತ್ಯಜಿಸಿದ ಮನಕಲುಕುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣಪತಿ ಗಲ್ಲಿಯಲ್ಲಿ ನಡೆದಿದೆ.

ಹೌದು, ಎರಡೂವರೆ ವರ್ಷದ ಸಾತ್ವಿಕ್ ಮೃತ ಮಗು. ಈ ಪುಟ್ಟ ಬಾಲಕ ಬಾಲಕ ಮನೆಯಲ್ಲಿ ಸಂಜೆ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದ. ಈ ವೇಳೆ ಅಚಾನಕ್ ಆಗಿ ಶೇಂಗಾ ಬೀಜ ಗಂಟಲಲ್ಲಿ ಸಿಲುಕಿಕೊಂಡಿವೆ. ಕೂಡಲೇ ಮನೆಯರು ಶೇಂಗಾ ಬೀಜ ತೆಗೆಯಲು ಹರಸಾಹಸ ಪಟ್ಟರು. ಗಂಟಲಿನಲ್ಲಿ ಮೂರು ಶೆಂಗಾ ಬೀಜಗಳು ಗಂಟಲಿನಲ್ಲಿಸಿಲುಕಿದ್ದ ಕಾರಣ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು.

ಹಾಗೋ ಹೀಗೋ ಪ್ರಯತ್ನಪಟ್ಟು ಮನೆಯವರು ಎರಡು ಶೇಂಗಾ ಬೀಜವನ್ನು ಮಗುವಿನ ಗಂಟಲಿನಿoದ ಹೊರತೆಗೆದಿದ್ದಾರೆ. ಆದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಗಂಟಲಲ್ಲಿದ್ದ ಇನ್ನೊಂದು ಶೇಂಗಾ ಬೀಜವನ್ನು ಹೊರತೆಗೆದ್ದಾರೆ. ಈ ವೇಳೆಗೆ ಆಗಲೇ ಮಗುವಿನ ಉಸಿರು ನಿಂತಿತ್ತು.

ಈ ಘಟನೆಯಿಂದ ವಿಚಲಿತರಾದ ಮುಗುವಿನ ಅಜ್ಜಿ, ಅಲ್ಲೇ ಸಮೀಪದಲ್ಲಿರುವ ದೇವಸ್ಥಾನಕ್ಕೆ ಮುಗುವಿನ ಮೃತದೇಹವನ್ನು ತೆಗೆದುಕೊಂಡು ಹೋಗಿ ದೇವರ ಮುಂದೆ ಇಟ್ಟು ಬದುಕಿಸಿಕೊಡುವಂತೆ ಅಂಗಲಾಚಿದ್ದಾಳೆ. ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದ ಅಜ್ಜಿಯ ರೋಧನ ಮುಗಿಲುಮುಟ್ಟಿತ್ತು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button