ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ

ಜೊಯಿಡಾ: ಕೊವಿಡ್ ಸಂದರ್ಬದಲ್ಲಿ ಸಾಕಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್ ವಾರಿಯರ್ಸ್ ಸಾಕಷ್ಟು ಸಿಬ್ಬಂದಿಗಳು ದುಡಿದಿದ್ದಾರೆ. ಆರೋಗ್ಯ,ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ ಬಗ್ಗೆ ನಮ್ಮ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮೂಲಕ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಅದರಂತೆ ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗಾಗಿ ಕೂಡಾ ನಮ್ಮ ಸಂಸ್ಥೆಯ ವತಿಯಿಂದ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಪ್ರಸಾಧ ದೇಶಪಾಂಡೆ ಹೇಳಿದರು.

ಅವರು ಬುಧವಾರ ಜೊಯಿಡಾ ಕುಣಬಿ ಭವನದಲ್ಲಿ 250 ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಆಹಾರ ಕೀಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಬದಲ್ಲಿ ತಾ.ಪಂ ಇಓ ಆನಂದ ಬಡಕುಂದ್ರಿ, ನಾಗೋಡಾ ಗ್ರಾ.ಪಂ ಸದಸ್ಯ ಶ್ರೀಧರ ದಬಗಾರ, ವಿಆರ್‌ಡಿಎಮ್ ಟ್ರಸ್ಟ್ ನ ವಿನಾಯಕ ಚೌಹಾನ,ಅಶೋಕ ಸೂರ್ಯವಂಶಿ, ಜಿ.ವಿ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಜೋಯಿಡಾ

Exit mobile version