Follow Us On

WhatsApp Group
Focus News
Trending

ಶ್ರೀಮತಿ ಭಾಗೀರಥಿ ಮಹಾಬಲ ನಾಯ್ಕ ಅವರಿಂದ ಶ್ರೀ ಮಾರಿಕಾಂಬಾ ದೇವಿಗೆ ಒಂದು ಜೊತೆ ಬಂಗಾರದ ಬಳೆ ಅರ್ಪಣೆ

ಶಿರಸಿ : ಶ್ರೀಮತಿ ಭಾಗೀರಥಿ ಮಹಾಬಲ ನಾಯ್ಕ , ಗಣೇಶ ನಗರ, ಶಿರಸಿ ಅವರು ಇಂದು ಶ್ರೀ ಮಾರಿಕಾಂಬಾ ದೇವಿಗೆ ಅಂದಾಜು 113 ಗ್ರಾಂ 500 ಮಿ.ಗ್ರಾಂ ತೂಕದ ಅಂದಾಜು ಬೆಲೆ ರೂ. 5,10,750-00 ( ರೂ. ಐದು ಲಕ್ಷ ಹತ್ತು ಸಾವಿರದಾ ಏಳುನೂರಾ ಐವತ್ತು ಮಾತ್ರ ) ಮೊತ್ತದ ಬಂಗಾರದ ಒಂದು ಜೊತೆ ಬಳೆಯನ್ನು ಇಂದು ಅರ್ಪಣೆ ಮಾಡಿದರು.

ಈ ಸಮಯದಲ್ಲಿ ಅವರ ಕುಟುಂಬದ ಸದಸ್ಯರು ಹಾಗೂ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಬೈಲೂರ, ನಗರಸಭೆ ಮಾಜಿ ಸದಸ್ಯರಾದ ಶ್ರೀಮತಿ ಜ್ಯೋತಿ ಪಾಟೀಲರವರು ಅವರು ಮತ್ತು ಅವರ ಕುಟುಂಬದ ಇತರ ಸದಸ್ಯರೊಂದಿಗೆ ಆಗಮಿಸಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಧರ್ಮದರ್ಶಿ ಮಂಡಳಿಯ ತಾಬಾ ವಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ರವೀಂದ್ರ.ಜಿ. ನಾಯ್ಕ, ಉಪಾಧ್ಯಕ್ಷರಾದ ಶ್ರೀ ಸುದೇಶ ಜಿ. ಜೋಗಳೇಕರ, ಧರ್ಮದರ್ಶಿಗಳಾದ ಶ್ರೀ ಸುಧೀರ. ಎಸ್. ಹಂದ್ರಾಳ, ಶ್ರೀಮತಿ ವತ್ಸಲಾ ಪಿ. ಹೆಗಡೆ, ಶ್ರೀ ಶಿವಾನಂದ. ಎಸ್. ಶೆಟ್ಟಿ ರವರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಾಗೂ ಶ್ರೀಮತಿ ಭಾಗೀರಥಿ ಮಹಾಬಲ ನಾಯ್ಕ ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಶ್ರೀದೇವಿಯ ಅನುಗ್ರಹಯುಕ್ತ ಪ್ರಸಾದ ನೀಡಿ ಗೌರವಿಸಲಾಯಿತು.

ವಿಸ್ಮಯ ನ್ಯೂಸ್, ಶಿರಸಿ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button