Follow Us On

WhatsApp Group
Big News
Trending

ಮೊಬೈಲ್ ಬದಲು ಬಂತು ಮಣ್ಣು! ಎಚ್ಚರ… ಎಚ್ಚರ…. ಅಪರಿಚಿತನ ಮಾತುನಂಬಿ ಮೋಸಹೋದ ಯುವಕ

ಅಂಕೋಲಾ: ಮೋಸ ಮಾಡುವವರು ಹೊಸ ಹೊಸ ವಿಧಾನವನ್ನು ಕಂಡುಕೊoಡು ಮೋಸ ಮಾಡುತ್ತಲೇ ಇದ್ದಾರೆ. ಅಪರಿಚಿತರ ಮಾತು ನಂಬಿ ಅನೇಕ ಹಣಕಳೆದುಕೊಂಡು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇಂತಹದೇ ಘಟನೆ ಇದೀಗ ತಾಲೂಕಿನಲ್ಲಿ ನಡೆದಿದೆ.

ಯುವಕನೊಬ್ಬ ಅಪರಿಚಿತ ವ್ಯಕ್ತಿಯ ಕರೆ ನಂಬಿ ಮೋಸ ಹೋಗಿದ್ದಾನೆ. 2,500 ರೂಪಾಯಿಗೆ ಗುಣಮಟ್ಟದ ಮೊಬೈಲ್ ನೀಡುತ್ತೇವೆಂದು ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಇದನ್ನ ನಂಬಿದ ಯುವಕ ಕಡಿಮೆ ದರಕ್ಕೆ ಉತ್ತಮ ಮೊಬೈಲ್ ಸಿಗುತ್ತದೆ ಎಂದು ಕಳುಹಿಸಿ ಎಂದಿದ್ದಾನೆ. ಅದರಂತೆ ಯುವಕನ ವಿಳಾಸಕ್ಕೆ ಪಾರ್ಸೆಲ್ ಒಂದು ಬಂದಿದ್ದು, ಅದನ್ನು ಯುವಕ 2,500 ರೂಪಾಯಿ ಕೊಟ್ಟು ಬಿಡಿಸಿಕೊಂಡಿದ್ದಾನೆ.

ಆದರೆ, ಪಾರ್ಸೆಲ್ ತೆರೆದು ನೋಡಿದಾಗ ಶಾಕ್ ಕಾದಿತ್ತು. ಬಾಕ್ಸ್ ನಲ್ಲಿ ಮೊಬೈಲ್ ಇರಲಿಲ್ಲ. ಅದರ ಬದಲು ಹಾಳಾದ ಬಿಡಿಭಾಗ ಮತ್ತು ಗಣಪತಿ ಮಾಡುವ ಮಣ್ಣನ್ನು ತುಂಬಲಾಗಿತ್ತು. ಆಗಲೇ ಯುವಕನಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಅದೇ ನಂಬರ್ ಗೆ ಕರೆ ಮಾಡಿದಾಗ ಪಾರ್ಸೆಲ್ ಕಳುಹಿಸಿದ ವ್ಯಕ್ತಿ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಯುವಕ ಪೊಲೀಸರಿಗೆ ದೂರು ನೀಡಿದ್ದು, ಅಂಚೆಯವರಲ್ಲಿ ವಿಚಾರಿಸದಾಗ ತಮಿಳುನಾಡಿನ ಕಂಪೆನಯ ಹೆಸರಿಗೆ ಹಣ ಹೋಗಿದೆ ಎಂದಿದ್ದಾರೆ.

ಸಾರ್ವಜನಿಕರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಬೇಕಿದೆ. ಅಲ್ಲದೆ, ಇಲ್ಲದಿದ್ದರೆ ಮೋಸ ಹೋಗುವ ಪ್ರಕರಣ ಹೆಚ್ಚುತ್ತಲೇ ಇರುತ್ತದೆ.

ವಿಸ್ಮಯ ನ್ಯೂಸ್, ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button