Follow Us On

WhatsApp Group
Important
Trending

ತಂಗಿ ಜೊತೆ ಅಕ್ರಮ ಸಂಬಂಧ : ಮನೆಗೆ ಬಂದು ಅಕ್ಕನ ಕೊಲೆ ಮಾಡಿದ ಭೂಪ: ತಂಗಿ ಮಗನ ಕರೆದುಕೊಂಡು ಪರಾರಿ

ವಿಪರ್ಯಾಸ ನೊಡಿ. ತಂಗಿ ಮಾಡಿದ ತಪ್ಪಿನಿಂದ ಅಕ್ಕನ ಕೊಲೆಯಾಗಿದೆ. ಹೌದು, ತಂಗಿಯನ್ನು ಮನೆಗೆ ಕರೆಯಿಸಿಕೊಂಡ ಅಕ್ಕ, ಸಾವಿನ ಮನೆಗೆ ತೆರಳಿದ್ದಾಳೆ.

ಕಾರವಾರ: ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತುಡಗುಣಿಯ ವಿಶಾಲನಗರದಲ್ಲಿ ನಡೆದಿತ್ತು. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸರೋಜಿನಿ ನಾಯರ್ (45) ಮನೆಯಲ್ಲಿ ನಿಗೂಢವಾಗಿ ಕೊಲೆಯಾಗಿದ್ದರು. ಆದರೆ, ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಸರೋಜಿನಿ ನಾಯರ್ ಮನೆಯಲ್ಲಿ ತಮ್ಮ ತಂಗಿ, ತಾಯಿ ಹಾಗೂ ತಂಗಿಯ ಮಗನ ಜೊತೆ ಇರುತ್ತಿದ್ದರು. ಅವರ ತಂಗಿ ಬೆಳಿಗ್ಗೆಯೇ ಎಲ್ಲಿಯೋ ಹೋಗಿದ್ದರು. ಈ ವೇಳೆ ಮನೆಗೆ ಬಂದ ಆರೋಪಿ ತಂಗಿ ಇಲ್ಲದ್ದನ್ನು ನೋಡಿದ್ದು, ಸರೋಜಿನಿ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ.

ಈ ವೇಳೆ ಸಿಟ್ಟಿಗೆದ್ದ ಆರೋಪಿ ಈಕೆಯನ್ನ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಅಲ್ಲದೆ, ತಂಗಿಯ ಮಗನನ್ನು ಚಾಕು ಹಿಡಿದು ಹೆದರಿಸಿ ತನ್ನ ಜೊತೆ ಕರೆದೊಯ್ದಿದ್ದಾನೆ.

ಇದೀಗ ಪೊಲೀಸರು ಕೊಲೆಗೆ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಶಿರಸಿ ತಾಲೂಕು ಕೆರೆಕೊಪ್ಪದ ಕೃಷ್ಣನಾಯ್ಕ ಆರೋಪಿ. ಕೊಲೆಯಾದ ಸರೋಜ ನಾಯರ್ ತಂಗಿ ಹಾಗೂ ಆರೋಪಿ ಕೃಷ್ಣಾನಾಯ್ಕ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಇತ್ತೀಚೆಗೆ ಆರೋಪಿಯ ಜೊತೆ ಜಗಳ ಮಾಡಿಕೊಂಡು ತಂಗಿ ಅಕ್ಕನ ಮನೆಗೆ ಬಂದಿದ್ದಳು.

ಇದಾದ ಬಳಿಕ ಕೆಲ ದಿನಗಳ ಹಿಂದೆ ಮೃತ ಸರೋಜ, ತಂಗಿಯನ್ನು ಬೆಳಗಾವಿಗೆ ಕಳುಹಿಸಿದ್ದಳು. ಈ ಸಂಬಂಧ ಆರೋಪಿ ಕೃಷ್ಣಾನಾಯ್ಕ ಸರೋಜಾಳ ಮನೆಗೆ ಬಂದು ಗಲಾಟೆ ಮಾಡಿದ್ದು, ಈ ವೇಳೆ ಸರೋಜಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ .

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button