ವಂದಿಗೆಯ ಸಂಜೀವ ನಾಯಕ ವಿಧಿವಿಶ: ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಪ್ರಗತಿ ಪರ ರೈತ

ಅಂಕೋಲಾ ಅ 6: ತಾಲೂಕಿನ ವಂದಿಗೆ ಗ್ರಾಮದ ಪ್ರಗತಿಪರ ರೈತ ಸಂಜೀವ . ವಿ.ನಾಯಕ (56), ಬುಧವಾರ ಬೆಳಿಗ್ಗೆ ವಿಧಿವಶರಾದರು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕಾರವಾರದ ಸಿವಿಲ್ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಮಿಷನ್ ವೆಂಕಟ್ರಮಣ ನಾಯಕ ಎಂದೇ ಪರಿಚಿತರಾಗಿದ್ದ ತಾಲೂಕಿನ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ದಿ. ವೆಂಕಟರಮಣ ನಾಯಕರ ಮಗನಾದ ಸಂಜೀವ ನಾಯಕ ,ಪ್ರಗತಿಪರ ರೈತನಾಗಿ ಗುರುತಿಸಿಕೊಂಡು,ಕೃಷಿ ಮತ್ತು ಹೈನುಗಾರಿಕೆ ಮೂಲಕ ಜೀವನ ಸಾಗಿಸುತ್ತಿದ್ದ.

ದನ-ಕರುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು , ಊರಿನ ಹತ್ತಾರು ಧಾರ್ಮಿಕ,ಸಾಮಾಜಿಕ,ಸಾಂಸ್ಕೃತಿಕ ಮತ್ತಿತರ ವಿಧಾಯಕ ಚಟುವಟಿಕೆಗಳಲ್ಲಿ ಸರ್ವರಿಗೂ ಸಹಕಾರ ನೀಡುತ್ತಿದ್ದ ಸಂಜೀವ ನಾಯಕ,ತನ್ನ ಹಾಸ್ಯ ಪ್ರವೃತ್ತಿಯ ಮೂಲಕವೂ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ.ಮೃತನ ಸಹೋದರ ಸಹೋದರಿಯರು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದ್ದು,ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಸಂಜೀವ ನಾಯಕ ಕಠಿಣ ಪರಿಶ್ರಮಿಯಾಗಿ, ಹಲವರ ಕಷ್ಟಕ್ಕೆ ಸ್ಪಂದಿಸುತ್ತಿದ್ದ.

ಈತನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಪ್ತರು ಬಂಧುಬಳಗದವರು,ಹಿತೈಷಿಗಳು ಗೆಳೆಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಪತ್ನಿ, ಇಬ್ಬರು ಗಂಡುಮಕ್ಕಳು ಹಾಗೂ ಅಪಾರ ಬಂಧು-ಬಳಗ ತೊರೆದಿರುವ ಇವರ ನಿಧನಕ್ಕೆ ಹಲವು ಗಣ್ಯರು, ವಂದಿಗೆ ಊರ ಪ್ರಮುಖರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version