ನಾಡಿಗೆ ಬಂದಿದ್ದ‌ ಮೊಸಳೆ‌ ಹಿಡಿದು ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

ಜೋಯ್ಡಾ: ತಾಲೂಕಿನ ಜೋಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಗಣೇಶಗುಡಿಯ ಆಂಬೆಲಿಯ ಕಾಡಿನ ಕರ್ನಾಟಕ‌ ಪವರ್ ಹೌಸ್ ಪಕ್ಕ ಮೊಸಳೆ ಬಂದಿತ್ತು. ಸ್ಥಳಕ್ಕೆ ಬಂದ ಅರಣ್ಯ‌ ಅಧಿಕಾರಿಗಳು ಮೊಸಳೆ ಹಿಡಿದು ಕಾಳಿ ನದಿಗೆ ಬಿಟ್ಟಿದ್ದಾರೆ.

ವಲಯ ಅರಣ್ಯಾಧಿಕಾರಿ ಸಿ.ಜಿ. ನಾಯ್ಕ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ವಿಠಲ ಗುಬ್ಬಚ್ಚಿ ಹಾಗೂ ತಂಡ ಕಾಳಿನದಿಯಿಂದ ಮೇಲೆಬಂದು ಕೆ.ಪಿ.ಸಿ ಗಣೇಶಗುಡಿ ವಿದ್ಯುತ ಪವರ್ ಹೌಸಗೆ ಬಂದಿದ್ದ ಮೊಸಳೆ ಹಿಡಿದು ನದಿಗೆ ಬಿಟ್ಟಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version