Follow Us On

WhatsApp Group
Focus News
Trending

ಕಟ್ಟಿಗೆ ಶೇಖರಿಸಿಡಲು ಮಾಡಿರುವ ಶೆಡ್ಡಿನಲ್ಲಿ ಇತ್ತು ಒಂಟಿ ನಳಿಕೆಯ ನಾಡ ಬಂದೂಕು: ಆರೋಪಿ ಬಂಧನ

ಸಿದ್ದಾಪುರ: ಖಚಿತ ಮಾಹಿತಿ ಮೇರೆಗೆ ಕುಡೆಗೋಡ್ ಗ್ರಾಮದಲ್ಲಿ ದಾಳಿ ನಡೆಸಿದ‌ ಪೊಲೀಸರು ಅಕ್ರಮ ನಾಡ ಬಂದೂಕನ್ನು ವಶಪಡಿಸಿಕೊಂಡು ಬಲವಿoದ್ರ ತಿಮ್ಮ ಹಸ್ಲರ್ ಇವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

24 ವರ್ಷದ ಕೂಲಿ ಕೆಲಸ ಮಾಡುತ್ತಿರುವ ಆರೋಪಿತನಾದ ಬಲವಿಂದ್ರ ಹಸ್ಲರ ,‌ ನಾಡ ಬಂದೂಕನ್ನು ಯಾವುದೇ ಅಧಿಕೃತ ಪರವಾನಗೆ ಇಲ್ಲದೆ ಅನಧಿಕೃತವಾಗಿ ತನ್ನ ಮನೆಯ ಪಕ್ಕದಲ್ಲಿ ಕಟ್ಟಿಗೆ ಶೇಖರಿಸಿಡಲು ಮಾಡಿರುವ ಶೆಡ್ಡಿನಲ್ಲಿ ಇಟ್ಟುಕೊಂಡಿದ್ದ.

ಈ ವೇಳೆ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಜಿ ಕುಂಬಾರ ರವರು ಸಿಬ್ಬಂದಿ ಅವರೊಂದಿಗೆ ದಾಳಿಮಾಡಿ ಒಂಟಿ ನಳಿಕೆಯ ನಾಡ ಬಂದೂಕಿನೊಂದಿಗೆ ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಿಸ್ಮಯ ನ್ಯೂಸ್ ಸಿದ್ದಾಪುರ

Back to top button