Follow Us On

WhatsApp Group
Focus News
Trending

ನಡೆದಾಡಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನಿಗೆ ಆಶ್ರಯ ನೀಡಿದ ಪುನೀತ್ ರಾಜಕುಮಾರ್ ಆಶ್ರಯಧಾಮ: ಗುರುತು ಸಿಕ್ಕರೆ ಮಾಹಿತಿ ನೀಡಿ

ಸಿದ್ದಾಪುರ: ನಡೆದಾಡಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದ ಅನಾಥ ವೃದ್ಧನನ್ನು ಇಲ್ಲಿನ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಇಂದು ಕರೆತಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗ್ರೆ ಮಾವಿನಕಟ್ಟೆ ಹತ್ತಿರ ಅನಾಥ ಸ್ಥಿತಿಯಲ್ಲಿದ್ದ ವೃದ್ಧ ವ್ಯಕ್ತಿಯನ್ನು ಪೊಲೀಸರು ಭಟ್ಕಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.

ಇದೀಗ ಪೊಲೀಸರು ವೃದ್ಧನನ್ನು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ. ಸೊಂಟದ ಸುತ್ತಲೂ ಗಾಯಗಳಾಗಿ ಕೊಳೆತು ಹೋಗಿತ್ತು.

ವೃದ್ಧನನ್ನು ವಿಚಾರಿಸಲಾಗಿ ತನ್ನ ಹೆಸರು ಹಬೀಬ್‌ ಆಯಾಸಾಬ್ ಎಂದು ಹೇಳುತ್ತಿದ್ದಾನೆ. ಅಲ್ಲದೆ, ತನ್ನ ಊರು ಶೃಂಗೇರಿಯ ಕೊಪ್ಪ ಎಂದಿದ್ದಾನೆ. ಈತನ ಸಂಬಂಧಿಕರ ಗುರುತು ಇರುವವರು ಅಥವಾ ಸಂಬಂಧಿಕರು ಇದ್ದಲ್ಲಿ ತಕ್ಷಣ ಈ‌ ಮೊಬೈಲ್ ನಂಬರ್ 9481389187,8073197439 ಸಂಖ್ಯೆಗೆ , ಸಂಪರ್ಕಿಸುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್ ಸಿದ್ದಾಪುರ

Back to top button