Follow Us On

WhatsApp Group
Big News
Trending

ಆಕಳ ಹೊಟ್ಟೆಯಲ್ಲಿತ್ತು ಚಿನ್ನದ ಸರ! ಕರುವಿನ ಹೊಟ್ಟೆ ಸೇರಿದ್ದ ತಾಳಿ

ಶಿರಸಿ: ಮನೆಯಲ್ಲಿ ಚಿನ್ನದ ಸರವೊಂದು ಮಾಯವಾಗಿತ್ತು. ಮನೆಯವರು ಎಲ್ಲಿ ಹೋಯಿತು ಎಂದು ತಲೆಕೆಡಿಸಿಕೊಂಡಿದ್ದರು. ಹೌದು, ಕಾಣೆಯಾದ ಚಿನ್ನದ ಸರ ಆಕಳಹೊಟ್ಟೆಯಲ್ಲಿ ಮತ್ತೆಹಚ್ಚಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ಅಪರೂಪದ ಘಟನೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹೀಪನಳ್ಳಿ ಸಂಕದ ಮನೆಯ ಶ್ರೀಕಾಂತ ಹೆಗಡೆ ಅವರಿಗೆ ಸೇರಿದ ಆಕಳಿಗೆ ಕಟ್ಟಿದ್ದ ಲಕ್ಷ್ಮೀ ಸರ ಕಳೆದು ಹೋಗಿತ್ತು. ಮಾಲೀಕರು ಹುಡುಕಿ ಹುಡುಕಿ ಸುಸ್ತಾಗಿದ್ದರು. ಸರ ತಿಂದಿದ್ದು, ಹಸುವೇ? ಕರುವೇ ಎಂಬ ಅನುಮಾನದಲ್ಲಿ ಕಾಡಿದ್ದು, ತಿಂಗಳು ಕಳೆದರೂ ಸಗಣಿಯಲ್ಲಿ ಸರ ಬರದಿದ್ದಾಗ ಪಶುವೈದ್ಯರನ್ನು ಸಂಪರ್ಕಿಸಿದರು.

ಲೋಹ ಶೋಧದೊಂದಿಗೆ ಬಂದ ವೈಧಯರು ಸರ ವೈದ್ಯರು ಪರಿಕ್ಷಿಸಿ, ಹಸು ತಿಂದಿದ್ದು ಖಚಿತ ಪಡಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರ ತೆಗೆದಿದ್ದಾರೆ. ಇದರ ಜತೆಗೆ ಸರದ ಒಂದು ತಾಳಿ, ಕರುವಿನ ಹೊಟ್ಟೆ ಸೇರಿದ್ದನ್ನೂ ಪಶುವೈದ್ಯರು ಪತ್ತೆ ಹಚ್ಚಿದ್ದಾರೆ. ಎರಡು ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆಗೆ ನಡೆಸಿ, ಚಿನ್ನದ ಸರವನ್ನು ಹೊರತೆಗೆಯಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button