Follow Us On

WhatsApp Group
Focus News
Trending

ಸಿವಿಎಸ್‌ಕೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್‌ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿರಸಿಯಲ್ಲಿ ಇತ್ತೀಚೆಗೆಜಿಲ್ಲಾಮಟ್ಟದ ಭಗವದ್ಗೀತಾಅಭಿಯಾನದ ಪ್ರಯುಕ್ತ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿಕುಮಾರಿ ಭೂಮಿಕಾಎಸ್. ಭಟ್ಟ ಪ್ರಥಮ ಸ್ಥಾನ, ಕುಮಾರಚಂದನ ಹೆಗಡೆ ದ್ವಿತೀಯ ಸ್ಥಾನ ಪಡೆದುರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ. ಅದೇರೀತಿ, ಭಗವದ್ಗೀತಾಕಂಠಪಾಠದಲ್ಲಿಕುಮಾರ ಶ್ರೀನಿವಾಸ ವಿ. ಶಾನಭಾಗತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ.

ಪ್ರಾಥಮಿಕ ವಿಭಾಗದಿಂದಕುಮಾರಿ ಸ್ನೇಹಾಉದಯ ನಾಯಕ ಭಾಷಣದಲ್ಲಿತೃತೀಯ ಸ್ಥಾನ ಪಡೆದರೆ, ಕುಮಾರಿಅನನ್ಯಎಸ್. ಭಟ್ಟಕಂಠಪಾಠದಲ್ಲಿತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Back to top button