Follow Us On

WhatsApp Group
Important
Trending

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೃದ್ಧೆಯ ರಕ್ಷಣೆ

ಶಿರಸಿ : ಅನಾರೋಗ್ಯ ಮತ್ತು ಮಾನಸಿಕವಾಗಿ ನೊಂದ ವೃದ್ಧೆಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಾವಿಗೆ ಹಾರಿದ್ದಳು. ಇಲ್ಲಿಯ ಪಶುಸಂಗೋಪನಾ ಇಲಾಖೆಗೆ ಸೇರಿದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಾವಿಯಿಂದ ಹೊರತೆಗದು ಪ್ರಾಣ ಉಳಿಸಿದ ಘಟನೆ ವರದಿಯಾಗಿದೆ.

ಮಹಿಳೆ ಬಾವಿಗೆ ಹಾರಿದ್ದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಮತ್ತು ರಸ್ತೆಯಲ್ಲಿ ಸಾಗುತ್ತಿದ್ದ ಸಂಗೀತಾ ಮೊಬೈಲ್ ಶಾಪ್ ಸಿಬ್ಬಂದಿ ಸಚಿನ ಶಿವಕುಮಾರ ಮತ್ತು ನಿತಿನ ಸಮಯಪ್ರಜ್ಞೆಯಿಂದ ವೃದ್ಧೆ ಬರ್ತಾ ಫರ್ನಾಂಡಿಸ್ ಬದುಕಿದ್ದಾರೆ. ಗಣೇಶ ನಗರದ ದಿನೇಶ ಎಂಬುವವರು ಸಾರ್ವಜನಿಕರ ಸಹಕಾರದಿಂದ ಬಾವಿಗಿಳಿದು ಮೇಲೆತ್ತಲು ಸಹಕರಿಸಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button