Follow Us On

WhatsApp Group
Focus News
Trending

ಅಡಿಕೆ ಕದ್ದ ಮೂವರು ಕಳ್ಳರ ಬಂಧನ: ಅಡಿಕೆ ಚೀಲ ಮತ್ತು ಕಳ್ಳತನಕ್ಕೆ ಬಳಸಿದ ಕಾರು ವಶಕ್ಕೆ

ಸಿದ್ದಾಪುರ: ತಾಲೂಕಿನ ಹಲಗೇರಿಯ ವ್ಯಕ್ತಿಯೊಬ್ಬರ ಮನೆಯ ಅಡಕೆ ಕದ್ದ ಮೂವರು ಕಳ್ಳರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಹಲಗೇರಿಯ ದಿನೇಶ ಮಹಾಬಲೇಶ್ವರ ಹೆಗಡೆ ಎಂಬುವವರ ಮನೆಯ 7 ಅಡಕೆ ಚೀಲಗಳನ್ನು ಕದ್ದು ಪರಾರಿಯಾಗಿದ್ದ ಮೂವರಾದ ಬೇಡ್ಕಣಿಯ ಜಾಫರ ಅಬ್ದುಲ್ ಜಬ್ಬಾರ ಸಾಬ್, ಪಾರೂರ ಅಬ್ದುಲ್ ಜಬ್ಬಾರ ಸಾಬ್ ಹಾಗೂ ಹಜರತ ಅಲಿ ಅಬ್ದುಲ ಕರೀಂ ಎಂಬುವವರನ್ನು ಬಂಧಿಸಿ 40 ಸಾವಿರ ಮೌಲ್ಯದ 7 ಅಡಕೆ ಚೀಲ ಹಾಗೂ ಕಳ್ಳತನಕ್ಕೆ ಬಳಸಿದ ಮಾರುತಿ ಓಮಿನಿಯನ್ನು ವಶಕ್ಕೆ ಪಡೆಯಲಾಗಿದೆ.

ಡಿ.ಎಸ್.ಪಿ ರವಿ ನಾಯ್ಕ ಮರ‍್ಗರ‍್ಶನದಲ್ಲಿ ಸಿಪಿಐ ಕುಮಾರ ಕೆ, ಪಿ.ಎಸ್.ಐಗಳಾದ ಎಂ.ಜಿ.ಕುಂಬಾರ, ಎಂ.ವಿ.ಚಂದಾವರ, ಸಿಬ್ಬಂದಿಗಳಾದ ಗಂಗಾಧರ ಹೊಂಗಲ್, ರಮೇಶ ಕುಡಲ್, ಕರಬಸಪ್ಪ ಇಂಗಳಸೂರ, ಮೋಹನ ಗಾವಡಿ ಒಳಗೊಂಡ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button