Follow Us On

WhatsApp Group
Important
Trending

ಬೆಳಗಿನ ಜಾವ ಸಾರಾಯಿ ತಂದುಕೊಂಡುವಂತೆ ಪೀಡಿಸಿದ ಮಹಿಳೆ: ಸಿಟ್ಟಿಗೆದ್ದ ಜೊತೆಗಾರ ಬಲವಾಗಿ ದೂಡಿದ ಪರಿಣಾಮ ಕೆಳಕ್ಕೆ ಬಿದ್ದು ಮಹಿಳೆ ಸಾವು

ಕಾರವಾರ: ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕಳಸವಾಡದಲ್ಲಿ ಬೆಳಕಿಗೆ ಬಂದಿದೆ. ತಾಲ್ಲೂಕಿನ ಶಿರವಾಡದ ಶಾಂತಾ ಬಾಬು ಗೌಡ (45) ಮೃತ ಮಹಿಳೆ. ಹನುಮಂತ ಸಿದ್ದಿ ಎಂಬುವವರ ಮನೆಯಲ್ಲಿ ವಾಸವಿದ್ದ ಮಹಿಳೆ ಕಳಸವಾಡದ ಬಾಡಿಗೆ ಮನೆಯಲ್ಲಿ ಅಸ್ತವ್ಯಸ್ತ ಉಡುಗೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೌದು, ಈಕೆ ಬೆಳಗಿನ ಜಾವ ಸಾರಾಯಿ ತಂದು ಕೊಡುವಂತೆ ಪೀಡಿಸಿದ್ದಕ್ಕೆ, ಸಿಟ್ಟಿಗೆದ್ದ ಜೊತೆಗಾರ ಬಲವಾಗಿ ದೂಡಿದ ಪರಿಣಾಮ ಮಹಿಳೆ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಸಾವನ್ನಪ್ಪಿದ್ದಾಳೆ.

ಹನುಮಂತ ಸಿದ್ದಿ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಮೃತ ಶಾಂತಾ ಗೌಡಗಳು ಕಳೆದ ಕೆಲ ವರ್ಷಗಳಿಂದ ಗಂಡನಿoದ ಬೇರೆಯಾಗಿದ್ದು, ಹನುಮಂತ ಸಿದ್ಧಿಯೊಂದಿಗೆ ಸಂಬಂಧ ಬೆಳೆಸಿ, ಒಟ್ಟಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಶಾಂತಾ ಮದ್ಯ ವ್ಯಸನಿಯಾಗಿದ್ದು, ನಸುಕಿನ ಜಾವ ಸಾರಾಯಿ ತಂದುಕೊಂಡುವಂತೆ ಜೊತೆಗಾರನಿಗೆ ಪೀಡಿಸಿದ್ದಾಳೆ. ಆತ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈಕೆಯ ಕಾಟದಿಂದ ರೋಸಿಹೋಗಿದ್ದ ಹನುಮಂತ, ಈ ವೇಳೆ ಶಾಂತಾಳನ್ನು ದೂಡಿದ್ದು, ಅಲ್ಲೆ ಪಕ್ಕದಲ್ಲಿ ಬಿದ್ದು ರಕ್ತಸ್ರಾವವಾಗಿದೆ.

ಸ್ಥಳಕ್ಕೆ ಡಿವೈಎಸ್ ಪಿ ವೆಲ್ಲೆಂಟೈನ್ ಡಿಸೋಜಾ, ಪಿಐ ಸಿದ್ದಪ್ಪ ಬಿಳಗಿ, ಪಿಎಸ್ ಐ ಸಂತೋಷಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯಿಂದ ನಿಖರವಾದ ಕಾರಣ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button