Follow Us On

WhatsApp Group
Focus News
Trending

ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ: ಸೂಕ್ತ ಕ್ರಮಕೈಗೊಳ್ಳುತ್ತೇವೆ; ಕಾಗೇರಿ

ಶಿರಸಿ: ಕಾಲೊಡೆ, ಬಾಯೊಡೆ ತೀವ್ರವಾಗಿ ಹರಡುತ್ತಿರುವ ಕಾರಣ ಬಿಡಾಡಿ ಜಾನುವಾರುಗಳನ್ನು ಹಿಡಿದು ಮಾರಾಟ ಮಾಡಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದಲ್ಲಿ ಇತ್ತೀಚೆಗೆ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ. ದುರಂತವೆಂದರೆ ಅವುಗಳಿಗೆ ಕಾಲೊಡೆ ಬಾಯೊಡೆ ರೋಗ ಕಂಡುಬಂದಿದೆ‌‌ ಎಂದರು.

ಈ ಹಿನ್ನೆಲೆಯಲ್ಲಿ ನಗರಸಭೆ ಮೊದಲ ಹಂತದಲ್ಲಿ ಮಾಲೀಕರಿಗೆ ನೋಟೀಸ್ ನೀಡುತ್ತಿದೆ. ಸಂಬಂಧಪಟ್ಟ ಮಾಲಕರು ತಮ್ಮ ಹಸುಗಳನ್ನು ಹೊಡೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ನಗರಸಭೆ ಹಸುಗಳನ್ನು ಹಿಡಿದು ಮಾರಾಟ ಮಾಡಲಿದೆ. ಮಾರಾಟ ಆಗದ ಹಸುಗಳನ್ನ ಗೋಶಾಲೆಗೆ ನೀಡುವುದಾಗಿ ಎಂದು ಹೇಳಿದರು‌.

ವಿಸ್ಮಯ ನ್ಯೂಸ್ ಶಿರಸಿ

Back to top button