Follow Us On

WhatsApp Group
Important
Trending

ಮನೆಗೆ ಬಂದು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಅಪಹರಣ: ದೂರಿನಲ್ಲಿ ಏನಿದೆ ನೋಡಿ?

ಕುಮಟಾ: ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಮನೆಗೆ ಬಂದು ಅಕ್ರಮವಾಗಿ ಪ್ರವೇಶ ಮಾಡಿ, ಅಪಹರಣ ಮಾಡಿಕೊಂಡು ಹೋಗಿರುವ ಘಟನೆ ತಾಲೂಕಿನ ಕೋಡ್ಕಣಿಯಲ್ಲಿ ನಡೆದಿದೆ. ಬಾಲಚಂದ್ರ ಪಾಂಡುರoಗ ಶ್ಯಾನ್ ಭಾಗ್ ಅವರು ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿರಸಿಯ ಹುಲೇಕಲ್ ನ ಕಾಮಾಕ್ಷಿ ಮುಕ್ಕುಂದ ಪೈ ಅಪಹರಣಕ್ಕೊಳಗಾದ ಯುವತಿ ಎಂದು ತಿಳಿದುಬಂದಿದೆ.

ದೂರಿನಲ್ಲಿ ಏನಿದೆ: ತನ್ನ ಹೆಂಡತಿಯ ತಂಗಿಯ ಮಗಳನ್ನು ಮನೆಗೆ ಬಂದು ಅಪಹರಣ ಮಾಡಲಾಗಿದೆ. ಕಾಮಾಕ್ಷಿ ಮುಕ್ಕುಂದ ಪೈ ಶಿರಸಿಯ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇವಳು ಹುಲೇಕಲ್ ಗ್ರಾಮದ ಸುಬ್ರಹ್ಮಣ್ಯ ಭಂಡಾರಿ ( 27 ವರ್ಷ ) ಎನ್ನುವ ಯುವಕ, ಇಬ್ಬರು ಪ್ರೀತಿಸುತ್ತಿದ್ದರು. ಹೀಗಾಗಿ ಈ ವಿಷಯ ತಿಳಿದು ಮನೆಯವರೆಲ್ಲರೂ ಬುದ್ದಿವಾದ ಹೇಳಿದ್ದು, ಸ್ವಲ್ಪ ದಿನದ ಮಟ್ಟಿಗೆ ಕೊಡ್ಕಣಿಯ ತಮ್ಮ ಮನೆಯಲ್ಲಿ ಇರಲೆಂದು ಕರೆದುಕೊಂಡು ಬಂದಿದ್ದೆ.

ಈ ವೇಳೆ ಆರೋಪಿ ಸುಬ್ರಹ್ಮಣ್ಯ ಭಂಡಾರಿ ತನ್ನ ಬೆಂಬಲಿಗರೊoದಿಗೆ ಬಂದು ತಮ್ಮ ಮನೆಗೆ ನುಗ್ಗಿ ನಮ್ಮ ಮನೆಯಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಬಾಲಚಂದ್ರ ಪಾಂಡುರoಗ ಶಾನ್ ಭಾಗ್ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button