Follow Us On

WhatsApp Group
Focus NewsImportant
Trending

ಮಳೆಯ ಆರ್ಭಟ: ಸಂಕರ್ಪ ಕಡಿತ ಭೀತಿ: ಹೆದ್ದಾರಿ ಮೇಲೆ ನಿಂತ ನೀರು

ಕಾರವಾರ: ಉತ್ತರಕನ್ನಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ನಿರಂತರoವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಂಕೋಲಾ- ಯಲ್ಲಾಪುರ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಗಿದೆ. ಸುಂಕಸಾಳ ಬಳಿ ನೀರು ಏರುತ್ತಿದ್ದು, ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಇದೇ ವೇಳೆ , ಕುಮಟಾ ಶಿರಸಿ ಹೆದ್ದಾರಿ ಸಂಚಾರ ಅಸ್ತವ್ಯಗೊಂಡಿದೆ. ಕುಮಟಾ- ಶಿರಸಿ ರಸ್ತೆ ಹೀಪನಳ್ಳಿ ಕತ್ರಿ ಬಳಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಮೇಲೆ ವಾಹನ ಸಾಲುಗಟ್ಟಿ ನಿಂತಿದ್ದು, ತೆರವು ಕಾರ್ಯಾಚರಣೆ ನಡೆಸುತ್ತಿದೆ.

ಸಂಗ್ರಹ ಚಿತ್ರ: ವಿಸ್ಮಯ ನ್ಯೂಸ್, ಕುಮಟಾ

Back to top button