Important
Trending

ವೇಗವಾಗಿ ಬಂದು ಬೈಕ್ ಗೆ ಡಿಕ್ಕಿಹೊಡೆದ ಕಾರು: ಹಿಂಬದಿ ಸವಾರ ಸಾವು; ಬೈಕ್ ಸವಾರ ಗಂಭೀರ

ಸಿಡಿದುಬಿದ್ದ ಬೈಕ್: ಕಾರು ಪಲ್ಟಿ

ಅಂಕೋಲಾ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಹಿಂಬದಿ ಸವಾರ ಮೃತಪಟ್ಟ ಘಟನೆ ರಾ.ಹೆ 66 ರ ತಾಲೂಕಿನ ಅವರ್ಸಾ – ಹಾರವಾಡ ಗಡಿಭಾಗದ ಡಾಂಬರ್ ಪ್ಲಾಂಟ್ ಕ್ರಾಸ್ ಬಳಿ ಸಂಭವಿಸಿದೆ. 

ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೇ ಪಲ್ಟಿಯಾದ ತುಂಬಿದ ಗ್ಯಾಸ್ ಟ್ಯಾಂಕರ್: ಸ್ಥಳೀಯರಲ್ಲಿ ಆತಂಕ

ಭಾವಿಕೇರಿ ಗ್ರಾಪಂ ವ್ಯಾಪ್ತಿಯ  ಗಾಬಿತ ಕೇಣಿ ನಿವಾಸಿ  ಸಚಿನ್ ಕೃಷ್ಣ ಕುರ್ಲೆ ಮೃತ ದುರ್ದೈವಿಯಾಗಿದ್ದು, ಈತನು ತನ್ನ  ತಂದೆ  ಕೃಷ್ಣ ಕುರ್ಲೆಯ ಜೊತೆ ಕಾರವಾರದಿಂದ ಅಂಕೋಲಾದತ್ತ ಮನೆಗೆ ಬರುತ್ತಿರಬೇಕಾದರೆ, ಮಾರ್ಗ ಮಧ್ಯೆ ಡಾಂಬರ್ ಪ್ಲಾಂಟ್ ಕ್ರಾಸ್  ಬಳಿ ಜೋರಾಗಿ ಬಂದ ಕಾರೊಂದು ಅಪಘಾತ ಪಡಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸಿಡಿದು ಬಿದ್ದಿದ್ದರೆ, ಕಾರ್ ಪಲ್ಟಿಯಾಗಿ ರಸ್ತೆಯಂಚಿನ  ಕಂದಕಕ್ಕೆ ಬಿದ್ದಿದೆ. ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button