Important
Trending

ಆಹಾರ ಅರಸಿ ಮನೆಯತ್ತ ಬಂದ ಬೃಹತ್ ಕಾಳಿಂಗ ಸರ್ಪ: ಮನೆಯವರು ಕಂಗಾಲು

ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು

ಕಾರವಾರ: ಮಳೆಗಾಲದಲ್ಲಿ ಸಾಮಾನ್ಯವಾಗಿ ಹಾವುಗಳು ಮನೆಯತ್ತ ಆಗಮಿಸುತ್ತವೆ. ಹೌದು, ಎಂಟು ಅಡಿ ಬೃಹತ್ ಕಾಳಿಂಗ ಸರ್ಪವೊಂದು ಆಹಾರ ಅರಸಿ ಮನೆಗೆ ನುಗ್ಗಿತ್ತು. ಬೃಹತ್ ಕಾಳಿಂಗ ಸರ್ಪವನ್ನು ನೋಡಿ ಮನೆಯವರು ಕಂಗಾಲಾಗಿದ್ದರು. ಈ ಘಟನೆ ನಡೆದಿರೋದು ಕಾರವಾರ ತಾಲೂಕಿನ ಶಿರವಾಡದಲ್ಲಿ. ಈ ವೇಳೆ ಮನೆಯ ಜನರು ನೋಡಿ ಉರಗ ತಜ್ಞರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಉರಗ ಪ್ರೇಮಿಗಳು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button