Focus News
Trending

ಊಟಮಾಡಿ ಮಲಗಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತ: ಸ್ವರ್ಗಸ್ಥರಾದ ವಿಠ್ಠಲ ಶಾಂತಾರಾಮ ಶಾನಭಾಗ

ಸಿದ್ದಾಪುರ : ಪಟ್ಟಣದ ಶ್ರೀರಾಘವೇಂದ್ರ ಮಠದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡುಬರುತ್ತಿದ್ದ ವಿಠ್ಠಲ ಶಾಂತಾರಾಮ ಶಾನಭಾಗ (82) ಊಟಮಾಡಿ ಮಲಗಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ..ಸಿದ್ದಾಪುರದ ಗ್ರಾಹಕರ ಸೇವಾ ಸಹಕಾರಿ ಸಂಘದಲ್ಲಿ ಎಕೌಟೆಂಟ್ ಆಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿವಂಗತರು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀರಾಘವೇಂದ್ರಮಠದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು.

ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ  ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿಠ್ಠಲ ಶಾನಭಾಗರು ಶ್ರೀ ರಾಘವೇಂದ್ರ ಮಠಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಶ್ರೀ ಮಠದ ಉತ್ಕರ್ಷಕ್ಕೆ ಕಾರಣರಾಗಿದ್ದರು. ಅವರ ಅಗಲುವಿಕೆ ಶ್ರೀಮಠದ ದೃಷ್ಟಿಯಿಂದ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ ಗೋವಿಂದ ಶಾನಭಾಗ ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button