ಕುಮಟಾ; ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಯುವಕರನ್ನು ಕುಮಟಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಯುವತಿ ಗರ್ಬಿಣಿಯಾಗಿರುವ ವಿಷಯ ತಿಳಿದು ಕಂಗಾಲಾದ ಮನೆಯವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತೆಂಗಿನಮರದಿoದ ಕಾಯಿ ಕೊಯ್ಯುವ ವೇಳೆ ಅವಾಂತರ: ಕೆಳಗೆ ಬಿದ್ದು ಇಬ್ಬರ ಸಾವು
ಬಾಲಕಿಯ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೋನಳ್ಳಿಯ ಅಖಿಲ್ ಈಶ್ವರ್ ಅಡಿಗುಂಡಿ ಮತ್ತು ಹೊನ್ನಾವರ ಕಡತೋಕಾದ ಸಮರ್ಥ ಜಟ್ಟಿ ಮುಕ್ರಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,, ನ್ಯಾಯಾಂಗಬಂಧನ ವಿಧಿಸಲಾಗಿದೆ. ಆಟೋದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಸ್ಮಯ ನ್ಯೂಸ್ ಯೋಗೀಶ್ ಮಡಿವಾಳ ಕುಮಟಾ
![](https://i0.wp.com/vismaya24x7.com/wp-content/uploads/2022/08/Raj-Granites-new.jpg?resize=700%2C394&ssl=1)