Focus News
Trending

ಮೆಣಸಿನ ಹುಡಿ ಇಟ್ಟುಕೊಂಡು ಮಧ್ಯರಾತ್ರಿ ದರೊಡೆಗೆ ಪ್ಲಾನ್ ರೂಪಿಸಿದ್ದರು

ಮಂಕಿ ಪೊಲೀಸರ ಕಾರ್ಯಾಚರಣೆ
ಮಧ್ಯರಾತ್ರಿ ದರೊಡೆಕೋರರ ಬಂಧನ
[sliders_pack id=”2570″]

ಹೊನ್ನಾವರ: ಭಟ್ಕಳ ಎ.ಎಸ್ಪಿ ನಿಖಿಲ್ ಬುಳ್ಳಾವರ್ ಅವರು ನೀಡಿದ ಖಚಿತ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ ಮಂಕಿ ಠಾಣೆಯ ಪಿ.ಎಸ್.ಐ ಪಿ.ಬಿ.ಕೊಣ್ಣೂರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ್, ಪ್ರಶಾಂತ್ ದೇಸಾಯಿ, ಶಿವಾನಂದ ನಾಯ್ಕ, ರಾಜೇಶ, ಕಿರಣ ಒಳಗೊಂಡ ತಂಡ, ನಾಲ್ವರು ದರೊಡೆಕೋರರನ್ನು ಬಂಧಿಸಿದೆ. ಮದ್ಯರಾತ್ರಿ ಸಮಯ 1.30ರ ಸುಮಾರಿಗೆ ಮಂಕಿ ಮಾವಿನಕಟ್ಟೆ ಬಳಿ ಹೆದ್ದಾರಿ ಪಕ್ಕದಲ್ಲಿ ತಾವು ಬಂದಿದ್ದ ಸಫಾರಿ ವಾಹನವನ್ನು ಬದಿಗೆ ನಿಲ್ಲಿಸಿ ರಸ್ತೆಯಲ್ಲಿ ಹೋಗಿ ಬರುವ ವಾಹನಗಳನ್ನು ತಡೆದು ದರೋಡೆಮಾಡುವ ಯತ್ನದಲ್ಲಿದ್ದ ತಂಡವನ್ನು ಸುತ್ತುವರಿದು ನಾಲ್ವರನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಸ್ಥಳೀಯ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಬಂಧಿತರನ್ನು ಭಟ್ಕಳ ನಿವಾಸಿಯಾದ 38 ವರ್ಷದ ಅಬ್ದುಲ್ ಸಲಾಂ ಮಹಮದ್ ಬ್ಯಾರಿ, ಭಟ್ಕಳ ಉಸ್ಮಾನ್ ನಗರದ 26 ವರ್ಷದ ಅಬ್ದುಲ್ ರಶೀದ್ ಹಜರತ್ ಸಾಬ, ಜಾಲಿ ರೋಡ್ ನಿವಾಸಿ 37 ವರ್ಷದ ಹಬೀಬವುಲ್ಲ ಅಹಮದ್ ಸಾಬ್, ಶಿವಮೊಗ್ಗ ರಿಪ್ಪನ್ ಪೇಟೆಯವನಾದ 25 ವರ್ಷದ ತನ್ವೀರ್ ರಫೀಕ್ ಎಂದು ಗುರುತಿಸಲಾಗಿದೆ. ಮಂಕಿ ನವಾಯತ್ ಕಾಲೋನಿಯ 22 ವಯಸ್ಸಿನ ಫಯಾಜ್ ಪಕ್ರದಿ ಹಾಗೂ 23 ವಯಸ್ಸಿನ ಸುಜ್ಜತ್ ಬಿದರಕಟ್ಟೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಬಂಧಿತರಿoದ ಅಂದಾಜು 4 ಲಕ್ಷ ಮೌಲ್ಯದ ಸಫಾರಿ ವಾಹನ ಎರಡು ದೊಣ್ಣೆ, ಕಲ್ಲು, ಎರಡು ಚಾಕು, ಮೆಣಸಿನ ಹುಡಿ ಪ್ಯಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button