Follow Us On

WhatsApp Group
Important
Trending

ಮೂತ್ರವಿಸರ್ಜನೆಗೆ ಹೋದಾಗ ಆಯತಪ್ಪಿ ತೆರೆದ ಬಾವಿಯಲ್ಲಿ ಬಿದ್ದ ಯುವತಿಯೊಂದಿಗೆ ಬಂದ ಪ್ರವಾಸಿಗ

ಗೋಕರ್ಣ: ಬೆಂಗಳೂರಿಗೆ ಬಸ್‌ನಲ್ಲಿ ತೆರಳಬೇಕಾಗಿದ್ದ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆಗೆಂದು ಹೋದಾಗ ತೆರೆದ ಬಾವಿಗೆ ಬಿದ್ದ ಘಟನೆ ಗೋಕರ್ಣದ ಮೇಲಿನಕೇರಿಯಲ್ಲಿ ನಡೆದಿದೆ. ಬೆಂಗಳೂರಿನಿoದ ಪ್ರವಾಸಕ್ಕೆಂದು ಬಂದಿದ್ದ ಯುವಕ ಕತ್ತಲಲ್ಲಿ ಮೂತ್ರ ವಿಸರ್ಜನೆಗಾಗಿ ಹೋದಾಗ ಆಯತಪ್ಪಿ ತೆರೆದ ಬಾವಿಯಲ್ಲಿ ಬಿದ್ದಿದ್ದ.

ಇದನ್ನು ಗಮನಿಸಿದ ಸ್ಥಳೀಯ ಕಿರಣ್ ಶೆಟ್ಟಿ ಎಂಬಾತ ರಕ್ಷಣೆಗಾಗಿ ಹಲವರಿಗೆ ಸಂಪರ್ಕಿಸಿ, ಕರೆತಂದು ಬಾವಿಗೆ ಬಿದ್ದವನನ್ನು ಎತ್ತಿದ್ದಾರೆ. ದೆಹಲಿ ಮೂಲದ ರಾಮೇಶ್ವರ ಬಾವಿಗೆ ಬಿದ್ದ ಪ್ರವಾಸಿಗ. ಈತ ಯುವತಿಯೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದ.ಈತನನ್ನು ಸ್ಥಳೀಯರ ಸಹಾಯದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣೆ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button