Follow Us On

WhatsApp Group
Focus NewsImportant

ಹಸೆಮಣೆ ಏರಿ ಮೂರು ತಿಂಗಳಾಗುವುದರೊಳಗೆ ಮಸಣಸೇರುವಂಥಾದ ನವ ವಿವಾಹಿತ: ಪ್ರತಿಷ್ಠಿತ ಜವಳಿ ವ್ಯಾಪಾರಸ್ಥ ಕುಟುಂಬದ ಕಿರಿಯ ಕುಡಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದನೇ?

ಅಂಕೋಲಾ: ನವ ವಿವಾಹಿತನೋರ್ವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪಟ್ಟಣದ ಕಾರವಾರ – ಅಂಕೋಲಾ ಮುಖ್ಯ ರಸ್ತೆಯ  ಅಂಬೇಡ್ಕರ್ ಕಾಲೋನಿ (ಅಜ್ಜಿ ಕಟ್ಟಾ ) ಸ್ವಾಗತ ಕಮಾನಿನ ಬಳಿಯ ಮನೆಯೊಂದರಲ್ಲಿ ಸಂಭವಿಸಿದೆ.  ಮನೋಜ್ ಶಿವಾನಂದ ಶೆಟ್ಟಿ (40) ಮೃತ ದುರ್ದೈವಿಯಾಗಿದ್ದಾನೆ. ಪಟ್ಟಣದ 3 ಕಡೆ ಬಟ್ಟೆ ಅಂಗಡಿಗಳನ್ನು ನಡೆಸುತ್ತಾ ಪ್ರತಿಷ್ಠಿತ ಕುಟುಂಬವಾಗಿ ಗುರುತಿಸಿಕೊಂಡಿದ್ದ ಶಿವಾನಂದ ಶೆಟ್ಟಿ ಅವರ ಐವರು ಮಕ್ಕಳಲ್ಲಿ ಕಿರಿಯವನಾಗಿದ್ದ ಮನೋಜ, ಇತ್ತೀಚೆಗಷ್ಟೇ ಕುಮಟಾದ ಬಾಡದ ಯುವತಿಯೊಂದಿಗೆ ಹಸೆ ಮಣೆ ಏರಿ ಸಂಸಾರ ಸುಖ ಅನುಭವಿಸಬೇಕಿದ್ದ ಈತ ಮದುವೆಯಾಗಿ  ಮೂರು ತಿಂಗಳಾಗುವುದರೊಳಗೆ ಮಸಣ ಸೇರುವಂತಾಗಿರುವುದು ವಿಧಿಯಾಟವೇ ಸರಿ.

ಬೆಳಗಿನ ಜಾವ ಮನೆಯ ಬಾಗಿಲಿಗೆ ಬಂದ ಚಿರತೆ: ಕಂಗಾಲಾಗಿ ಕೂಗಿದ ಮನೆಯ ಮಾಲೀಕ

ಗಂಡ ಹೆಂಡರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದು,ಹೆಂಡತಿ ಮನೆಯಿಂದ ಹೊರಗಡೆ ಹೋದಾಗ ಮನೆಯ ಅಡಿಗೆ ಕೋಣೆಯ ಬಾಗಿಲು ಹಾಕಿಕೊಂಡು, ಮನೆಯ  ಮೇಲ್ಚಾವಣಿಯ ಪಕಾಸಿಗೆ ನೈಲಾನ್ ಹಗ್ಗ ಕಟ್ಟಿ,ಕುತ್ತಿಗೆಗೆ ಬಿಗಿದುಕೊಂಡು ಸಾವಿಗೆ ಶರಣಾಗಿರುವ ಸಾಧ್ಯತೆ ಬಗ್ಗೆ ಕೇಳಿ ಬಂದಿದೆ. ಸಾಂಸಾರಿಕ ಹೊಂದಾಣಿಕೆ ಕೊರತೆ, ಇಲ್ಲವೇ ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾವಿಗೆ ಶರಣಾಗುವ ಮುನ್ನ ಟೆಚ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದ್ದು, ಪೋಲಿಸ್ ತನಿಕೆಯಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ  ತಿಳಿದು ಬರಬೇಕಿದೆ.

ಪಿಎಸೈ ಮಹಾಂತೇಶ್ ವಾಲ್ಮೀಕಿ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸಾಮಾಜಿಕ ಕಾರ್ಯಕರ್ತರಾದ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ,ರತನ್ ನಾಯ್ಕ, ಬೊಮ್ಮಯ್ಯ ನಾಯ್ಕ, ಅನಿಲ ಮಹಾಲೆ,ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು  ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button