Follow Us On

WhatsApp Group
Focus NewsImportant
Trending

ಬೈಕಿಗೆ ಗುದ್ದಿದ ಟಿಪ್ಪರ್: ಬೈಕ್ ಚಾಲಕ ಸ್ಥಳದಲ್ಲೇ ಸಾವು

ಹೊನ್ನಾವರ: ಪಟ್ಟಣದ ಕುಳಕೋಡ್ ಕ್ರಾಸ್ ಸಮೀಪ ಟಿಪ್ಪರ್, ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಆರೋಪಿತ ಲಾರಿ ಚಾಲಕ ತಾಲೂಕಿನ ಹಳದೀಪುರ ಸಾಲೀಕೇರಿಯ ನಿವಾಸಿ ಅಣ್ಣಪ್ಪ ನಾಗಪ್ಪ ಗೌಡ ಎಂದು ಗುರುತಿಸಲಾಗಿದೆ. ಗೇರುಸೊಪ್ಪಾ ಸರ್ಕಲ್ ಕಡೆಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ , ಕುಳಕೋಡ್ ಕ್ರಾಸ್ ಸಮೀಪ ಯಾವುದೇ ಸೂಚನೆ ನೀಡದೆ ಏಕಾಎಕಿ ಬಲಕ್ಕೆ ತಿರುಗಿದೆ ಎನ್ನಲಾಗಿದೆ.

ಈ ವೇಳೆ ಗೇರುಸೊಪ್ಪಾ ಮಾರ್ಗದಿಂದ ಹೊನ್ನಾವರ ಕಡೆಗೆ ಆಗಮಿಸುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ. ಅಪಘಾತದಿಂದ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಜಲವಳ್ಳಿ ಗ್ರಾಮ ಪಂಚಾಯತ್‌ನ ಕರಿಕುರ್ವಾ ನಿವಾಸಿ ಹರೀಶ್ ಕೃಷ್ಣ ಮೇಸ್ತ (28) ಎಂದು ಗುರುತಿಸಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button