ಸಿದ್ದಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಸಿದ್ದಾಪುರ: ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತ ವ್ಯಸ್ತ ಉಂಟಾಗಿದೆ. ಅಘನಾಶಿನಿ ನದಿ ತುಂಬಿ ಹರಿಯುತ್ತಿದೆ . ನದಿ ಅಂಚಿನ ಪ್ರದೇಶಗಳಲ್ಲಿ ಅಪಾಯ ಮುನ್ಸೂಚನೆ ಕಂಡುಬರುತ್ತಿದೆ. ಕೊಂಡಲಗಿ, ಸರಕುಳಿ, ಹೇರೂರ್ ಮುಂತಾದ ಊರುಗಳಲ್ಲಿ ನದಿ ತುಂಬಿ ರಸ್ತೆಯಲ್ಲಿ ನೀರು ಉಕ್ಕುತ್ತಿದೆ ರಸ್ತೆಗಳು ಜಲಾವೃತವಾಗಿದ್ದು, ಪರಿಣಾಮ ವಾಹನ ಸಂಚಾರ ಕ್ಕೆ ಅಡಚಣೆ ಉಂಟಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದೇ ಸಂದರ್ಭದಲ್ಲಿ ತುಂಬಿದ ನದಿಯಲ್ಲಿ ತೇಲಿ ಬರುತ್ತಿರುವ ತೆಂಗಿನ ಕಾಯಿಗಳನ್ನು ಹಿಡಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಎಡೆ ಬಿಡದೆ ನಿರಂತರ ವಾಗಿ ಮಳೆ ಸುರಿಯುತ್ತಿದ್ದು ಮಳೆ ಮುಂದುವರಿಸಿದೆ ನೆರೆ ಸೃಷ್ಟಿಯಾಗುವ ಆತಂಖ ಎದುರಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version