Follow Us On

WhatsApp Group
Important
Trending

ಮನೆಯಂಗಳಕ್ಕೆ ಆಗಮಿಸಿದ ಚಿರತೆ : ನಾಯಿಯನ್ನು ಹೊತ್ತೊಯ್ದು ಕ್ಷಣಾರ್ಧದಲ್ಲಿ ಎಸ್ಕೇಪ್

ಶಿರಸಿ: ಶಿರಸಿ-ಯಲ್ಲಾಪುರ ರಸ್ತೆಯ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ಚಿರತೆ ದಾಳಿ ಹೆಚ್ಚುತ್ತಿದೆ. ಜುಲೈ 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಚಿರತೆಯ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ಧೈತ್ಯಾಕಾರದ ಚಿರತೆ ಪಂಜರದಲ್ಲಿದ್ದ ನಾಯಿಯನ್ನು ಹೊತ್ತೊಯ್ದಿದೆ. ಎರಡು ವಾರದ ಅವಧಿಯಲ್ಲಿ ವರದಿಯಾದ ಮೂರನೇ ದಾಳಿ ಇದಾಗಿದೆ. ಕ್ಯಾಮರಾದಲ್ಲಿ ಚಿರತೆದಾಳಿಯ ವಿಡಿಯೋ ಸೆರೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button