ಜಿಲ್ಲಾ ಪೊಲೀಸರು ಹೇಳಿದ್ದೇನು?
ಇಂಥ ಸುದ್ದಿಯನ್ನು ನಂಬಬೇಡಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯೂ JMB ಉಗ್ರರ ಅಡಗುತಾಣವಾಯ್ತು, ಶಾಂತಿಯ ನಗರಿ ಶಿರಸಿ JMB ಉಗ್ರರು ಕರಿನೆರಳು? ಹೀಗೆ ಇಂಥ ಹಲವು ಸುದ್ದಿಗಳು ಇಂದು ಎಲ್ಲೆಡೆ ಹರಿದಾಡುತ್ತಿದ್ದವು. ಈಗ ಇದು ಇದು ಸುಳ್ಳು ಸುದ್ದಿಯಾಗಿದೆ ಎಂಬುದು ಬಹಿರಂಗವಾಗಿದೆ.
ಶಿರಸಿ ನಗರದಲ್ಲಿ ವಾರದ ಹಿಂದೆ ಶೋಧ ಕಾರ್ಯ ನಡೆಸಿರುವ ಎಸ್ಐಎಸ್ಡಿ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಿ ಬಿಡುಗಡೆ ಮಾಡಿದೆ. ಬನವಾಸಿಯ ಯುವಕನೊಬ್ಬನಿಂದ ಒಂಬತ್ತು ಸಿಮ್ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಉಗ್ರ ಸಂಘಟನೆಗೆ ಬಳಸಿಕೊಳ್ಳಲಾಗಿತ್ತು ಎಂಬೆಲ್ಲ ಸುದ್ದಿ ಎಲ್ಲೆಡೆ ಹರಿದಾಡಿದ್ದವು.
ಇದು ಸುಳ್ಳು ಸುದ್ದಿ. ಈ ತರಹದ ಯಾವುದೇ ಮಾಹಿತಿಗಳಿದ್ದಲ್ಲಿ ಜಿಲ್ಲಾ ಪೋಲೀಸ್ ಕಛೇರಿಯ ಪತ್ರಿಕಾ ಪ್ರಕಟಣೆ ಮೂಲಕ ನೀಡಲಾಗುವುದು. ಈ ರೀತಿಯ ಸುಳ್ಳು ವದಂತಿ ಸೃಷ್ಟಿಸಿ ಹರಿಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲೀಸ್ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ನೀಡಿ ಮಾಹಿತಿ ನೀಡಿದ್ದಾರೆ.
ಬ್ಯೂರೋ ರಿಪೋರ್ಟ್ , ವಿಸ್ಮಯ ನ್ಯೂಸ್
- HGML Recruitment 2024: ಚಿನ್ನದ ಗಣಿಯಲ್ಲಿ 168 ಹುದ್ದೆಗಳಿಗೆ ನೇಮಕಾತಿ: ಐಟಿಐ, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ: 48 ಸಾವಿರ ಮಾಸಿಕ ವೇತನ
- ಬಾಡ ಜಾತ್ರಾ ಮಹೋತ್ಸವ: ಮಹಾರಥದಲ್ಲಿ ಆಸೀನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡ ಭಕ್ತರು
- Manjuguni Venkataramana Temple: ವೆಂಕಟರಮಣ ದೇವರ ರಥೋತ್ಸವ
- ದೊಡ್ಡ ದೇವರ ಮಹಿಮೆಅಪಾರ : ದೋಣಿಯಲ್ಲಿ ವಿರಾಜಮಾನವಾಗಿ ಜಲ ವಿಹಾರ
- ಶಿರಸಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆ: ಸಿದ್ಧತೆ ಪರಿಶೀಲಿಸಿದ ಕಾಗೇರಿ