ಸಿಡಿಲು ಬಡಿದು 6 ಮಂದಿ ಅಸ್ವಸ್ಥ: ಸ್ವಲ್ಪದರಲ್ಲೇ ಉಳಿಯಿತು ಪ್ರಾಣ

ಸಿದ್ದಾಪುರ : ಸಿಡಿಲು ಬಡಿದು 6 ಜನರು ಅಸ್ವಸ್ಥರಾದ ಘಟನೆ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕರ್ಕಿಸವಲ್ ಗ್ರಾಮದ ಗಾಳಿಜಡ್ಡಿ ಮಜಿರೆಯಲ್ಲಿ ನಡೆದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಅಸ್ವಸ್ಥ ಗೊಂಡವರನ್ನು ಸಿದ್ದಾಪುರ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಹಿಸಿರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಯಪ್ರಜ್ಞೆಯಿಂದ ರೈಲು ದುರಂತ ತಪ್ಪಿಸಿದ ಸಿಬ್ಬಂದಿಗೆ ಸನ್ಮಾನ

ತಹಸೀಲ್ದಾರ್ ಎಂ. ಆರ್. ಕುಲ್ಕರ್ಣಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಸಂಭವಹಿಸಿದ ಜಾಗದ ಸಮೀಪದ ಮನೆಗಳಿಗೆ ಅಲ್ಪ ಹಾನಿ ಯಾಗಿರುತ್ತದೆ. ಘಟನೆಯಲ್ಲಿ ವಿದ್ಯಾ ಭಾಸ್ಕರ್ ಚೆನ್ನಯ್ಯ (14), ಸುನಂದ ತಿಮ್ಮ ಚೆನ್ನಯ್ಯ (50) ಸುನೀತ ಗಣಪತಿ ಚೆನ್ನಯ್ಯ(25) ವಿನಯ್ ಭಾಸ್ಕರ್ ಚೆನ್ನಯ್ಯ(18) ಪ್ರೇಮ ಭಾಸ್ಕರ್ ಚೆನ್ನಯ್ಯ(40) ವಿಹಾನ್ ಧನಂಜಯ್ ಚೆನ್ನಯ್ಯ (11 ತಿಂಗಳು )ಇವರುಗಳು ಅಸ್ವಸ್ಥರಾಗಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖoಡ ಸಿದ್ದಾಪುರ

Exit mobile version