Join Our

WhatsApp Group
Important
Trending

ಭಟ್ಕಳದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ಅಂದರ್ : ಗರುಡಾ ಗ್ಯಾಂಗಿನ ಇಬ್ಬರು ಪರಾರಿ

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

ಭಟ್ಕಳ: ರಸ್ತೆಯಲ್ಲಿ ಹೋಗುಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ `ಗರುಡಾ ಗ್ಯಾಂಗ್‌’ನ ಮೂವರನ್ನು ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್‌ ಅವರ ತಂಡದ ಬಲೆಗೆ ಬಿದ್ದಿದ್ದ ಘಟನೆ ನಡೆದಿದೆ. ಬುಧವಾರ ಬೆಳಗಿನ ನಸುಕಿನ ಜಾವದಲ್ಲಿ ಬಿಳಲಾಖಂಡ ಗ್ರಾಮದ ಸಾಗರ ರಸ್ತೆ ಬಳಿ ಐದು ಜನ ಇನೋವಾ ಕಾರಿನಲ್ಲಿ ಕೂತಿದ್ದ ಇವರ ಬಳಿ ಚಾಕು, ಚೂರಿ, ಕಾರಪುಡಿ ಸೇರಿ ಬಗೆ ಬಗೆಯ ವಸ್ತುಗಳಿದ್ದವು. ಮುಖ ಕಾಣದಂತೆ ಅವರೆಲ್ಲರೂ ಮಂಕಿ ಟೋಪಿ ಧರಿಸಿ ಹೋಗಿ-ಬರುವವರನ್ನು ಅಡ್ಡಗಟ್ಟಲು ಐವರು ಸಂಚು ಆರೋಪಿಗಳು ರೂಪಿಸಿದ್ದರು.

ಕತ್ತಲಿನಲ್ಲಿ ಜನ ಅಡಿಗಿರುವುದನ್ನು ಅನುಮಾನ ಗೊಂಡು ಪಿಎಸ್‌ಐ ರನ್ನಗೌಡ ಪಾಟೀಲ್‌ ವಿಚಾರಿಸಲು ಸ್ಥಳಕ್ಕೆ ತೆರಳಿದಾಗ ಓಡಿ ಹೋಗುವ ಪ್ರಯತ್ನಿಸಿ ಕಾರನ್ನು ಹಿಮ್ಮುಖವಾಗಿ ಚಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸು ವೇಳೆ ಕಾರು ಗಟಾರಕ್ಕೆ ಬಿದ್ದಿದ್ದು, ಈ ವೇಳೆ ಕಾರಿನಲ್ಲಿದ್ದ ಭಟ್ಕಳ ಮುಗ್ಧಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾಂವಿನ ನಬೀಲ್ ಓಡಿ ಪರಾರಿಯಾಗಿದ್ದಾರೆ.

ಗರುಡಾ ಗ್ಯಾಂಗಿನ ಪ್ರಮುಖ ಆರೋಪಿತರಾದ ಮಂಗಳೂರಿನ ಜಲೀಲ ಹುಸೈನ್, ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ
ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಮೂವರನ್ನು ಬಂದಿಸಿದ್ದಾರೆ. ಜಲೀಲ ಹುಸೈನ್ ವಿರುದ್ಧ ಕಳ್ಳತನ, ದರೋಡೆ ಸೇರಿ 11 ಪ್ರಕರಣಗಳಿದ್ದವು, ಹಾಗೂ ನಾಶೀರ್ ಹಕಿಂ ಮತ್ತು ಬಾಲಕನ ವಿರುದ್ಧವೂ ಕೆಲವು ಪ್ರಕರಣವು ವಿಚಾರಣೆ ನಡೆಯುತ್ತಿದ್ದು, ಸಿಕ್ಕಿಬಿದ್ದವರ ಬಳಿಯಿದ್ದ 1500 ಸಾವಿರ ನಗದು, ಮೊಬೈಲ್, ಚಾಕು, ಬೆಲ್ಟು, ಖಾರದಪುಡಿ,ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಇನ್ನೂ ತಪ್ಪಿಸಿಕೊಂಡ ಆರೋಪಿಗಳ ಪತ್ತೆಗೆ ಪೋಲೀಸರು ವಿಶೇಷ ತಂಡ ರಚಿಸಿ ಬಲೆ ಬಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ., ಜಗದೀಶ ಎಂ. ಮಾರ್ಗದರ್ಶನ ನೀಡಿದ್ದರು. ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ನೇತೃತ್ವದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ., ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈಗಳಾದ ರನ್ನಗೌಡ ಪಾಟೀಲ, ಪಿಎಸೈ ಭರಮಪ್ಪ ಬೆಳಗಲಿ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸೈಗಳಾದ ನವೀನ ಎಸ್‌. ನಾಯ್ಕ, ಶಾಂತಿನಾಥ ಕೆ.ಪಾಸಾನೆ ಮತ್ತು ಸಿಬ್ಬಂದಿ ವಿನಾಯಕ ಪಾಟೀಲ, ಅಂಬರೀಶ ಕುಂಬಾರಿ, ವಿನೋದ ಜಿ.ಬಿ., ಲೋಕೇಶ ಕತ್ತಿ, ನಿಂಗನಗೌಡ ಪಾಟೀಲ, ಜಗದೀಶ ನಾಯ್ಕ ವಿಜಯ ಜಾಧವ, ದುರ್ಗೇಶ ನಾಯ್ಕ ಮತ್ತು ದೇವರಾಜ ಮೊಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button