Join Our

WhatsApp Group
Important
Trending

ಹನ್ನೊಂದು ರಾಜ್ಯಗಳಲ್ಲಿ 41 ಕೋಟಿ ಲಪಟಾಯಿಸಿದ್ದ ಕುಖ್ಯಾತ ವಂಚಕನ ಕೈಗೆ ಕೋಳ : ಕನ್ನಡ ಕರಾವಳಿಯ ಪೊಲೀಸರಿಂದ ಯಶಸ್ವೀ ಕಾರ್ಯಾಚರಣೆ

ಕಾರವಾರ: ಈತ ಅಂತಿಥ ಸಾಮಾನ್ಯ ವಂಚಕನಲ್ಲ. ಕರ್ನಾಟಕ ಕೇರಳ , ಆಂಧ್ರ ಸೇರಿ ದೇಶದ ಸುಮಾರು 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ತನ್ನ ಚಾಲಾಕಿತನ ತೋರ್ಪಡಿಸಿ, ಸೈಬರ್ ವಂಚನೆ,ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆ ಮೂಲಕ ಸುಮಾರು 41 ಕೋಟಿ ರೂಪಾಯಿ ಲಪಟಾಯಿಸಿದ್ದ. ಕೊನೆಗೂ ಈ ಕುಖ್ಯಾತ ವಂಚಕನ ಕೈಗೆ, ಕನ್ನಡ – ಕರಾವಳಿಯ ಕಾರವಾರ ಸೈಬರ್ ಕ್ರೈಂ ಮತ್ತು ಉ ಕ ಜಿಲ್ಲಾ ಪೊಲೀಸ್ ವಿಶೇಷ ತಂಡ ಕೈ ಕೋಳ ತೊಡಿಸಿ, ಕಾರವಾರಕ್ಕೆ ಕರೆ ತಂದಿದೆ.

ಬಿಹಾರ ರಾಜ್ಯದ ಪಾಟ್ನಾದ ನ್ಯೂ ಜಕನಪುರ್ ನಿವಾಸಿ ಹರ್ದೀಪ್ ಸಿಂಗ್(39) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ತಮಿಳುನಾಡಿನಲ್ಲಿ 9 ಕೋಟಿ ಆಂಧ್ರಪ್ರದೇಶದಲ್ಲಿ 2.5 ಕೋಟಿ, ಬೆಂಗಳೂರು ಮಾರ್ತಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 80 ಲಕ್ಷ, ಪುಲಿಕೇಶಿ ನಗರ ವ್ಯಾಪ್ತಿಯಲ್ಲಿ 74.60 ಲಕ್ಷ,ಸೇರಿದಂತೆ ಹನ್ನೊಂದು ರಾಜ್ಯಗಳ ಬೇರೆ ಬೇರೆ ಭಾಗಗಳು ಸೇರಿ ಒಟ್ಟೂ ಸುಮಾರು 29 ಪ್ರಕರಣಗಳಲ್ಲಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಆರೋಪಿತನ ಹೆಸರಲ್ಲಿ 2 ಚಾಲ್ತಿ ಖಾತೆ ( ಮತ್ತು 8 ಉಳಿತಾಯ ಖಾತೆಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೊಂದಿದ್ದಾನೆ ಎನ್ನಲಾಗಿದೆ.

ಕರಾವಳಿಗರಿಗೂ ವಂಚಿಸಿದ್ದರಿಂದಲೇ ಬಿತ್ತು ಕೈ ಕೋಳ : ಕಳೆದ 2024 ರ ಅಕ್ಟೋಬರ್ 23 ರಂದು ಕಾರವಾರದ ಮುಖ್ಯ ರಸ್ತೆ ನಿವಾಸಿ
ವಿಲ್ಸನ್ ಫರ್ನಾಂಡಿಸ್ ಎನ್ನುವವರಿಗೆ ಕರೆ ಮಾಡಿ ತಾನು ಮುಂಬೈ ಡಿ.ಎಚ್. ಎಲ್ ಕೋರಿಯರ್ ಕಚೇರಿಯಿಂದ ಮಾತನಾಡುತ್ತಿದ್ದು ನಿಮ್ಮ ವಿಳಾಸಕ್ಕೆ ಬಂದ ಪಾರ್ಸಲ್ ನಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದು ಸ್ವಲ್ಪ ಸಮಯದ ನಂತರ ಪೊಲೀಸ್ ಸಮವಸ್ತ್ರದಲ್ದಿ ವಿಡಿಯೋ ಕಾಲ್ ಮಾಡಿ ಪಾರ್ಸಲ್ ನಲ್ಲಿ 400 ಗ್ರಾಂ ಎಂಡಿಎಂಎ ಮಾದಕ ವಸ್ತು,,ಬೇರೆ ಬೇರೆ ಹೆಸರಿನ 7 ಪಾಸ್ ಪೋರ್ಟ್, 5 ಕ್ರೆಡಿಟ್ ಕಾರ್ಡ್ ಮತ್ತು ಬಟ್ಟೆ ದೊರಕಿದ್ದು ತನಿಖೆಗೆ ಬರುವಂತೆ ಬೆದರಿಸಿ, ಬಳಿಕ 3.80 ಲಕ್ಷ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದನು ಈ ಕುರಿತು ವಿಲ್ಸನ್ ಫರ್ನಾಂಡಿಸ್ ಅವರ ಸಹೋದರ ರಾಫೆಲ್ ಎನ್ನುವವರು ಕ್ರೈಂ ಪೊಲೀಸ್ ಠಾಣೆಯಲ್ಲಿ ( ಸಿ.ಇ ಎನ್ ) ದೂರು ದಾಖಲಿಸಿದ್ದರು.

ಕಳ್ಳ ಕಾಕರರಿಗೆ ಸಿಂಹ ಸ್ವಪ್ನರಾಗಿದ್ದ ಉ ಕ ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ವಿಭಾಗದಲ್ಲಿ ಹಲವು ಪ್ರಕರಣ ಬೇಧಿಸಿ ಅನುಭವ ಇರುವ, ಡಿ.ವೈ.ಎಸ್. ಪಿ ಅಶ್ವಿನಿ ನೇತೃತ್ವದಲ್ಲಿ , ಅಂಕೋಲಾದ ಯುವ ಅಧಿಕಾರಿ ಮತ್ತು ಈ ಹಿಂದೆ ವಿಚಾರಣಾಧೀನ ಆರೋಪಿ ಒರ್ವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕಾಡುದಾರಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾಗ, ತಮ್ಮ ಮತ್ತು ತಮ್ಮವರ ಜೀವ ರಕ್ಷಣೆಗಾಗಿ , ಆರೋಪಿಯ ಕಾಲಿಗೆ ಗುಂಡೇಟು ಹೊಡೆದು, ಕಾನೂನು ಕ್ರಮ ಕೈಗೊಂಡು ಸುದ್ದಿಯಾಗಿದ್ದ ಪಿ.ಎಸ್.ಐ ಉದ್ದಪ್ಪ ಧರೆಪ್ಪನವರ್ ಮತ್ತು ಜಿಲ್ಲೆಯ ಸೈಬರ್ ಕ್ರೈಂ ಸಿಬ್ಬಂದಿಗಳ ವಿಶೇಷ ತಂಡ , ದೂರದ ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಆರೋಪಿತ, ಕೋಟ್ಯಾಂತರ ರೂಪಾಯಿಗಳ ವಂಚನೆ ನಡೆಸಿರುವುದು ತಿಳಿದು ಬಂದಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ, ಆತನನ್ನು ವಶಕ್ಕೆ ಪಡೆದ ಪೊಲೀಸರು , ಕಾನೂನು ಕ್ರಮ ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ ಎಲ್ಲೋ ಕುಳಿತು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ವಂಚನೆಯ ಬಲೆ ಬೀಸಿ, 41 ಕೋಟಿ ರೂ ಗಳಷ್ಟು ಬೃಹತ್ತ ಮೊತ್ತ ವಂಚಿಸಿದ , ಕುಖ್ಯಾತ ವಂಚಕನನ್ನು ಪತ್ತೆ ಮಾಡಿ, ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳದಂತೆ, ಚುರುಕಿನ ಯಶಸ್ವೀ ಕಾರ್ಯಾಚರಣೆ ನಡೆಸಿದ ಕರ್ನಾಟಕದ ಕರಾವಳಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವೆ ಹಾಗೂ ಕರ್ತವ್ಯ ಸ್ಮರಣೀಯ. ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಜನಸ್ನೇಹಿ ಎಸ್ ಪಿ ನಾರಾಯಣ ಎಂ ಇವರಿಗೆ, ಬೀಳ್ಕೊಡುಗೆ ಗೌರವ ಎನ್ನುವಂತೆ ಬಹುಕೋಟಿ ಮೊತ್ತದ ವಂಚಕನ ಜಾಡು ಪತ್ತೆ ಮಾಡಿದ ಕೆಳ ಹಂತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಮ್ಮ ಹಿರಿಯ ಅಧಿಕಾರಿಯ ಸೇವಾ ಹಿರಿತನಕ್ಕೆ ವಿಶೇಷ ಕೊಡುಗೆ ನೀಡಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button