ಕಾರವಾರ : ಉತ್ತರ ಕನ್ನಡದಲ್ಲಿ ಇಂದು 37 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 11, ಅಂಕೋಲಾ 4,ಭಟ್ಕಳ 6, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 1, ಹಳಿಯಾಳ 2 ದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಜೊಯಿಡಾ,ಮುಂಡಗೋಡುಮತ್ತು ಹೊನ್ನಾವರದಲ್ಲಿ ಯಾವುದೇ ಕೇಸ್ ಕಂಡುಬಂದಿಲ್ಲ.
ಇದೇ ವೇಳೆ ಇಂದು 54 ಜನರ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾರವಾರ 6, ಅಂಕೋಲಾ 7, , ಭಟ್ಕಳ 3, ಶಿರಸಿ 13, ಸಿದ್ದಾಪುರ 4, ಯಲ್ಲಾಪುರ 13, ಹಳಿಯಾಳ 6, ಜೋಯ್ಡಾ 2 ಜನರು ಸೇರಿ 54 ಜನ ಮನೆಗೆ ಮರಳಿದ್ದಾರೆ.
ಕುಮಟಾದಲ್ಲಿ ಏಳು ಪಾಸಿಟಿವ್:
ಕುಮಟಾ: ತಾಲೂಕಿನಲ್ಲಿ ಇಂದು ಏಳು ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಹೆಗಡೆ, ದೀವಗಿ, ಚಿತ್ರಗಿ, ಕೊಡ್ಕಣಿ, ಕತಗಾಲ, ಹೊಳೆಗದ್ದೆ ಭಾಗದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೆಗಡೆಯ 21 ವರ್ಷದ ಯುವಕ, 50 ವರ್ಷದ ಪುರುಷ, ಚಿತ್ರಗಿಯ 20 ವರ್ಷದ ಯುವಕ, ಕೊಡ್ಕಣಿಯ 70 ವರ್ಷದ ವೃದ್ಧ, ಕತಗಾಲದ 20 ವರ್ಷದ ಯುವತಿ, ದೀವಗಿಯ 27 ವರ್ಷದ ಮಹಿಳೆ ಹಾಗೂ ಹೊಳೆಗದ್ದೆಯ 32 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇಂದು 7 ಹೊಸ ಕರೊನಾ ಪ್ರಕರಣಗಳು ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,934 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸದ ಕಾರವಾರ
- ಗಿರ್ ಹಸುವಿನ ಸಗಣಿಯಿಂದ ಮಾಡಿದ & ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪರಿಸರ ಸ್ನೇಹಿ ಪೇಂಟ್: ಬೆರಗುಗೊಳಿಸುವ ಇದರ ವಿಶೇಷತೆ ನೋಡಿ?
- ಕುಮಟಾದಲ್ಲಿ ಕುಸಿದುಬಿದ್ದ ನಿರ್ಮಾಣ ಹಂತದ ಸೇತುವೆ: ಮುರಿದುಬಿದ್ದ ಹೆಗಡೆ – ತಾರೀಬಾಗಿಲು ಬ್ರಿಡ್ಜ್
- ಗೋಕರ್ಣಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ: ಮಹಾಗಣಪತಿ ಮತ್ತು ಮಹಾಬಲೇಶ್ವರನ ದರ್ಶನ: ಸಕಲ ವಿಘ್ನ ನಿವಾರಣೆಗೆ ಪ್ರಾರ್ಥನೆ
- ಇದೇ ಮೊದಲ ಬಾರಿಗೆ ಉತ್ತರಕನ್ನಡಕ್ಕೆ ಆಗಮಿಸಿದ ಮಂತ್ರಾಲಯ ಶ್ರೀಗಳು: ಭಕ್ತರಿಂದ ಶ್ರೀಗಳ ಪಾದಪೂಜೆ, ಭಿಕ್ಷಾ ಸೇವೆ
- ಮಾರ್ಚ್ 27 ರಂದು ಕುಮಟಾದಲ್ಲಿ ಡಿ.ಕೆ. ಶಿ ಸಭೆ, ಗೋಕರ್ಣದಲ್ಲಿ ವಾಸ್ತವ್ಯ: ಮಹಾಬಲೇಶ್ವರನ ದರ್ಶನ ಪಡೆಯಲಿರುವ ಉಪಮುಖ್ಯಮಂತ್ರಿ