Follow Us On

Google News
Important
Trending

ಕೊನೆಕ್ಷಣದಲ್ಲಿ ನಾಮಪತ್ರ ಸಲ್ಲಿಸಲು ಬಂದ ಮಹಿಳೆಯ ನಾಮಪತ್ರ ಕಸಿದು ಅಪರಿಚಿತ ಪರಾರಿ!

ಬೈಕ್ ನಲ್ಲಿ ಬಂದು ನಾಮಪತ್ರ ಕಸಿದುಕೊಂಡ
ಸಿನಿಮೀಯ ಶೈಲಿಯ ಘಟನೆಗೆ ಸಾರ್ವಜನಿಕರು ತಬ್ಬಿಬ್ಬು

ಶಿರಸಿ: ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶಿರಸಿ ತಾಲೂಕಿನಲ್ಲಿ ಬುಧವಾರ ಕೊನೆಯ ದಿನವಾಗಿತ್ತು. ಈ ವೇಳೆ ನಾಮಪತ್ರ ಸಲ್ಲಿಸಲು ಬಂದ ವೇಳೆ ಕೆಲವೊಂದು ಹೈಡ್ರಾ ನಡೆದಿದೆ.
ಹೌದು, ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ನಾಮಪತ್ರದೊಂದಿಗೆ ಬಂದ ಮಹಿಳೆಯ ನಾಮಪತ್ರವನ್ನೇ ಅಪರಿಚಿತನೊಬ್ಬ ಕಸಿದು ಪರಾರಿಯಾದ ಘಟನೆ ತಾಲೂಕಿನ ಗುಡ್ನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಗುತ್ಯಮ್ಮ ಎನ್ನುವ ಮಹಿಳೆ ನಾಮಪತ್ರ ಸಲ್ಲಿಸಲು ಗುಡ್ನಾಪುರ ಗ್ರಾಮ ಪಂಚಾಯತಗೆ ತಮ್ಮ ಸೂಚಕರೊಂದಿಗೆ ಬಂದಿದ್ದರು.

ಅದೇ ಸಮಯದಲ್ಲಿ ಬೈಕ್ ಮೇಲೆ ಬಂದ ಅಪರಿಚಿತನೊಬ್ಬ ಕ್ಷಣಮಾತ್ರದಲ್ಲಿ ಗುತ್ಯಮ್ಮ ಅವರ ಕೈಯ್ಯಲ್ಲಿದ್ದ ನಾಮಪತ್ರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಂತರದಲ್ಲಿ ಗುತ್ಯಮ್ಮ ಬೇರೆ ನಾಮಪತ್ರವನ್ನು ಸಲ್ಲಿಸಿದ್ದಾಳೆ ಎಂದು ತಿಳಿದು ಬಂದಿದೆ. ಕೈಯ್ಯಿಂದ ನಾಮಪತ್ರ ಕಸಿದುಕೊಳ್ಳುವ ವೇಳೆ ಮಹಿಳೆಯ ಕೈಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ಶಿರಸಿ

[sliders_pack id=”1487″]

Back to top button