ಕುಮಟಾ : ಕುಮಟಾದ ದೀವಗಿ ಸಮೀಪ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಈ ಕಾರಣದಿಂದ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕುಮಟಾ ತಾಲ್ಲೂಕಿನ ದೀವಗಿ ಸಮೀಪ ಗೋಕರ್ಣದಿಂದ ಬರುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬೈಕ್ ಗೆ ಲಾರಿ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಬೈಕ್ ಜೊತೆಗೆ ಡಿವೈಡರ್ ಗೆ ತಾಗಿ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಗೋಕರ್ಣದ ನಿವಾಸಿ ಮಧುಕೇಶ್ವರ ಶಾಂತಾರಾಮ ಸೂರಿ ಎಂದು ಗುರುತಿಸಲಾಗಿದೆ. ಕುಮಟಾಕ್ಕೆ ಕೆಲಸದ ನಿಮಿತ್ತ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿದ್ದು ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ.
ವಿಸ್ಮಯ ನ್ಯೂಸ್ ಕುಮಟಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ದಾಖಲಾತಿ ಪರೀಕ್ಷೆ
- ಶಾಲಾ ಮಕ್ಕಳ ಕಾರ್ಯಕ್ರಮ ನೋಡಿ ಬರಲು ಹೋದವ ರೈಲು ಬಡಿದು ದುರ್ಮರಣ
- ತರಂಗ ಫರ್ನಿಚರ್ ಫೆಸ್ಟಿವಲ್: ಆಕರ್ಷಕ ಆಫರ್ಗಳು ನಿಮಗಾಗಿ
- ಕಾರು ಪಲ್ಟಿ: ದೇಗುಲ ದರ್ಶನ ಮುಗಿಸಿ ಮರಳುತ್ತಿರುವಾಗ ದೈವಾಧೀನರಾದ ದಂಪತಿಗಳು
- ಸರ್ಕಾರಿ ಶಾಲಾ ಮುಖ್ಯಾಧ್ಯಾಪಕ ಅಕಾಲಿಕ ವಿಧಿವಶ. ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹಾರಿಹೋದ ಪ್ರಾಣಪಕ್ಷಿ