Important
Trending

ಉತ್ತರಕನ್ನಡದ ಗ್ರಾ.ಪಂ ಚುನಾವಣೆ ಫಲಿತಾಂಶ

  • ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟ
  • ಬಹುತೇಕ ಕಡೆ ಹೊಸ ಮುಖಗಳಿಗೆ ಸಿಕ್ಕಿದೆ ಅವಕಾಶ
  • ಹಲವು ಹಿರಿಯ ಅಭ್ಯರ್ಥಿಗಳಿಗೆ ಸೋಲಿನ ರುಚಿ

ಕುಮಟಾ: ತಲಗೇರಿ ವಾರ್ಡಿನ ಹಿಂದುಳಿದ ಅ ವರ್ಗದ ಮೀಸಲಾತಿಯಲ್ಲಿ ಮಂಜುನಾಥ ಶೇಟ್ 283 ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಗಣಪತಿ ನಾಯ್ಕ 252 ಮತದ ಅಂತರದಿಂದ ಜಯ ಗಳಿಸಿದ್ದಾರೆ. ಮಿರ್ಜಾನ್ ಗ್ರಾ.ಪಂ ವ್ಯಾಪ್ತಿಯ ನಾಗೂರು ವಾರ್ಡಿನಿಂದ ಸಾಮಾನ್ಯ ಮೀಸಲಾತಿಯಲ್ಲಿ ಮಂಜುನಾಥ ಮರಾಠಿ 539 ಮತ, ಹಿಂದುಳಿದ ಅ ಮೀಸಲಾತಿಯಲ್ಲಿ ಮಂಜುನಾಥ ಹರಿಕಂತ್ರ 582 ಮತಗಳ ಅಂತರಿಂದ ಜಯಗಳಿಸಿದ್ದಾರೆ. ಅಶೋಕೆ ವಾರ್ಡಿನ ಹಿಂದುಳಿದ ಅ ವರ್ಗದಿಂದ ಸಂದೇಶ ಗೌಡ 211 ಮತ, ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಶಾರದಾ ಮೂಡಂಗಿ 365 ಹಾಗೂ ಸಾಮಾನ್ಯ ಮೋಹನ ಮೂಡಂಗಿ 242 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಅಶೋಕೆ ವಾರ್ಡಿನ ಹಿಂದುಳಿದ ಅ ವರ್ಗದಿಂದ ಸಂದೇಶ ಗೌಡ 211 ಮತ, ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಶಾರದಾ ಮೂಡಂಗಿ 365 ಹಾಗೂ ಸಾಮಾನ್ಯ ಮೋಹನ ಮೂಡಂಗಿ 242 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬೆಳ್ಳಂಗಿ ವಾರ್ಡಿನ ಹಿಂದುಳಿದ ವರ್ಗದ ಬ ಕೇಸರಿ ಉದಯಕುಮಾರ ನಾಯ್ಕ 430 ಮತ, ಸಾಮಾನ್ಯ ರಾಜೀವ ಕುಪ್ಪ ಭಟ್ಟ 456 ಮತಗಳ ಅಂತರದಿಂದ ಜಯಗಳಿಸಿದ್ದಾರೆ

ಮೂರೂರು ಗ್ರಾ.ಪಂ ವ್ಯಾಪ್ತಿಯ ಕರ್ಕಿಮಕ್ಕಿ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಅನಿತಾ ನಾರಾಯಣ ಕಲ್ಲಗದ್ದೆ 414 ಮತ ಪಡೆದು ಜಯಗಳಿಸಿದ್ದಾರೆ.
ಕಲ್ಲಬ್ಬೆ ಗ್ರಾಮ ಪಂಚಾಯ್ತಿಯಲ್ಲಿ ಹಿಂದುಳಿದ ವರ್ಗ ‘ ಮಹಿಳೆಯಿಂದ ಗೋಪಿ ಗಣಪು ಗೌಡ 233, ಸಾಮಾನ್ಯದಿಂದ ರವಿ ಗಜಾನನ ಹೆಗಡೆ 278, ಸುಬ್ರಹ್ಮಣ್ಯ ರಾಮಕೃಷ್ಣ ಭಟ್ಟ 239 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.

ಕುಮಟಾ ತಾಲೂಕಿನ ಒಟ್ಟು 22 ಗ್ರಾಮ ಪಂಚಾಯತ್‌ಗಳಲ್ಲಿ 15ಕ್ಕೂ ಅಧಿಕ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳೆ ಈ ಭಾರಿ ಗ್ರಾಮ ಪಂಚಾಯತ ಅಧ್ಯಕ್ಷರಾಗುತ್ತಾರೆ . ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ ಕುಮಟಾದ ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಬೇಟಿ ನೀಡಿ, ಇಷ್ಟು ವರ್ಷಗಳ ಇತಿಹಾಸದಲ್ಲಿ ಗ್ರಾಮ ಚುನಾವಣೆಯಲ್ಲಿ ಬಿ.ಜೆ.ಪಿಗೆ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಿಕ್ಕಿರಲಿಲ್ಲ.
ದಿನಕರ ಶೆಟ್ಟಿ, ಶಾಸಕರು :ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ

ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸೊಪ್ಪಿನಹೊಸಳ್ಳಿ-1 ರ ವಾರ್ಡ್ ನಲ್ಲಿ ಕುಮುದಾ ಶಿವರಾಮ ಗೌಡ 157, ಭಾರತಿ ಗಣಪತಿ ಮುಕ್ರಿ 167,ಶೈಲಾ ಗಜಾನನ ನಾಯ್ಕ 306 ಮತಗಳೊಂದಿಗೆ ಗೆಲುವು ಪಡೆದಿದ್ದಾರೆ.
ಮಿರ್ಜಾನ ಗ್ರಾ.ಪಂ ವ್ಯಾಪ್ತಿಯ ವಾರ್ಡ್ ನಂಬರ್ 2 ಹಿಂದುಳಿದ ಮಹಿಳಾ ಮೀಸಲಾತಿಯಲ್ಲಿ ಕಾಮಾಕ್ಷಿ ಮುಕ್ರಿ 265 ಮತ ಪಡೆದು ಹಾಗೂ ಸಾಮಾನ್ಯ ಕ್ಷೇತ್ರದಿಂದ ನಾಗರಾಜ ನಾಯ್ಕ 392 ಮತ ಪಡೆದು ಜಯಗಳಿಸಿದ್ದಾರೆ

ಹೆಗಡೆ ಮಾಸೂರು ಸಾಮಾನ್ಯ ಮೀಸಲಾತಿ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಮಂಜುನಾಥ ಗಣೇಶ ಪಟಗಾರ ಸತತ ನಾಲ್ಕನೆಯ ಬಾರಿ 761 ಮತ ಪಡೆದು, ಸಾಮಾನ್ಯ ಮಹಿಳಾ ಮೀಸಲಾತಿ ಕ್ಷೇತ್ತದಿಂದ ಹೇಮಾ ಪಟಗಾರ 686 ಮತ ಪಡೆದು, ಹಿಂದುಳಿದ ವರ್ಗದ ಮಹಿಳಾ ಕ್ಷೇತ್ರದಿಂದ ಗೀತಾ ಮುಕ್ರಿ 445 ಹಾಗೂ ಅವಿರೋಧವಾಗಿ ಹಿಂದುಳೊದ ಬ ಮಹಿಳಾ ಮೀಸಲಾತಿಯಲ್ಲಿ ಪ್ರಭಾವತಿ ಬಂಗಾರಿ ಜಯಗಳಿಸಿದ್ದಾರೆ.

ವಾಲಗಳ್ಳಿ ಕಲ್ಕೇರಿ ಕ್ಷೇತ್ರದ ಮಾದೇವಿ ಮಾಸ್ತಿ ಮುಕ್ರಿ – 251. ಹಿಂದುಳಿದ ಅ ಮಹಿಳೆ ಯಶೋದ ದೇವರ ನಾಯ್ಕ -279.ಸಾಮಾನ್ಯ- ಮಂಜುನಾಥ ಗೌಡ -416
ಹನೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಕಿಕೊಡ್ಲದ ಹಿಂದುಳಿದಬಾ ವರ್ಗದ ಕ್ಷೇತ್ತದಿಂದ ಶಶಿಕಲಾ ಗೌಡ 112 ಮತ ಪಡೆದು ಹಾಗೂ ಸಾಮಾನ್ಯ ಕ್ಷೇತ್ರದಿಂದ 207 ಮತ ಪಡೆದು ಮನೋಹರ ಗೌಡ ಜಯಗಳಿಸಿದ್ದಾರೆ.

ದೇವಗಿರಿ ಗ್ರಾ.ಪಂ ವ್ಯಾಪ್ತಿಯ ಕಡೇಕೋಡಿ ವಾರ್ಡಿನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ ನಾಗಪ್ಪ ಪಟಗಾರ 239 ಮತ ಪಡೆದು ಜಯಗಳಿಸಿದ್ದಾರೆ. ಮೂರೂರು ಗ್ರಾ.ಪಂ ವ್ಯಾಪ್ತಿಯ ಕರ್ಕಿಮಕ್ಕಿ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಅನಿತಾ ನಾರಾಯಣ ಕಲ್ಲಗದ್ದೆ 414 ಮತ ಪಡೆದು ಜಯಗಳಿಸಿದ್ದಾರೆ.

ಗೋಕರ್ಣ ಗ್ರಾ.ಪಂ ವ್ಯಾಪ್ತಿಯ ಕೋಟಿ ತೀರ್ಥ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಪ್ರಸಾದ ಭಟ್ಟ ಸತತ 6 ನೆಯ ಬಾರಿಗೆ ಜಯಗಳಿಸಿದ್ದಾರೆ. ಅಲ್ಲದೇ ನಾಗರತ್ನಾ ಹಾವಗೋಡಿ, ವನಿತಾ ಗೌಡ ಜಯಗಳಿಸಿದ್ದಾರೆ.

ಹೊನ್ನಾವರದ ಗ್ರಾ.ಪಂ ವಿವರ:

ಹೊನ್ನಾವರ: ಹೊಸಾಕುಳಿ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಈ ಬಾರಿ ಕೂಡಾ ಜಯದ ನಗೆ ಬೀರಿದ್ದಾರೆ. ಕಾಸರಕಕೋಡ ಗ್ರಾಮ ಪಂಚಾಯತ್‌ನ ಟೋಂಕಾ ಮತಕ್ಷೇತ್ರದಿಂದ ಜಗದೀಶ್ ಈಶ್ವರ್ ತಾಂಡೇಲ್ ಮತ್ತು ಪ್ರೀತಿ ಗಣೇಶ್ ತಾಂಡೇಲ್ ಆಯ್ಕೆಯಾಗಿದ್ದಾರೆ. ಕಡತೋಕಾ ಗ್ರಾಮ ಪಂಚಾಯತ ದೇವು ನಾರಯಣ ಮುಕ್ರಿ, ಲತಾ ಗಣೇಶ ನಾಯ್ಕ, ಸಾವಿತ್ರಿ ಕೃಷ್ಣ ಭಟ್, ಕಡ್ಲೆ ಗ್ರಾಮ ಪಂಚಾಯತ ಗಣಪತಿ ಭಾಗ್ವತ, ಉಪ್ಪೋಣಿ ಗ್ರಾಮ ಪಂಚಾಯತ : ಮಂಜುನಾಥ ಗೌಡ, ಮಾದೇವಿ ಉಪ್ಪಾರ, ಮಾವಿನಕುರ್ವಾ ಗ್ರಾಮ ಪಂಚಾಯತ : ವನೀತಾ ಗೌಡ, ಜಿ.ಜಿ. ಶಂಕರ, ಕೊಡಾಣಿ ಗ್ರಾಮ ಪಂಚಾಯತ : ಜಯಂತಿ ನಾಯ್ಕ, ಶೋಭಾ ನಾಯ್ಕ, ಮಣಿಕಂಠ ನಾಯ್ಕ, ಜಯಂತ ನಾಯ್ಕ, ಮಾಗೋಡ ಗ್ರಾಮ ಪಂಚಾಯತ : ಲಲಿತಾ ಹಸ್ಲರ, ವೆಂಕಟೇಶ ಮೇಸ್ತ, ಶಿವರಾಮ ಹೆಗಡೆ, ಭಾಷಾ ಖಾನ್, ಕಡತೋಕಾ ಗ್ರಾಮ ಪಂಚಾಯತ : ಮಂಗಲಾ ಮುಕ್ರಿ ಹಳದೀಪುರ ಗ್ರಾಮ ಪಂಚಾಯತ :ಗಂಗೇ ಗೌಡ, ಮಹೇಶ ನಾಯ್ಕ, ಗೋವಿಂದ ಜೋಶಿ, ಮುಗ್ವಾ ಗ್ರಾಮ ಪಂಚಾಯತ : ಗೌರಿ ಅಂಬಿಗ,

ನವಿಲಗೋಣ ಗ್ರಾಮ ಪಂಚಾಯತ : ರವಿ ನಾಯ್ಕ, ಸತೀಶ ನಾಯ್ಕ, ನಗರಬಸ್ತಿಕೇರಿ ಗ್ರಾಮ ಪಂಚಾಯತ : ರೇಷ್ಮಾ ನಾಯ್ಕ, ಗಣಪಿ ಹಳ್ಳೇರ, ಪಕ್ರುದ್ದೀನ್ ಸಾಬ್, ಮಹೇಶ ನಾಯ್ಕ, ರಾಘು ನಾಯ್ಕ, ಚಂದಾವರ ಗ್ರಾಮ ಪಂಚಾಯತ : ಮಲ್ಲಿಕಾ ಭಂಡಾರಿ, ಕರ್ಕಿ ಗ್ರಾಮ ಪಂಚಾಯತ : ವಿನೋದ ನಾಯ್ಕ, ಹರೀಶ ನಾಯ್ಕ, ಜಲವಳ್ಳಿ ಗ್ರಾಮ ಪಂಚಾಯತ : ಚಂದ್ರಹಾಸ ನಾಯ್ಕ, ಬಳಕೂರು ಗ್ರಾಮ ಪಂಚಾಯತ : ವೆಂಕಟೇಶ ನಾಯ್ಕ, ಚಂದ್ರಕಲಾ ನಾಯ್ಕ, ವಿನುತಾ ಪೈ, ವಸಂತ ಗೌಡ, ಶಾಂತಿ ನಾಯ್ಕ, ಮಂಗಲಾ ಗೌಡ, ಚಿಕ್ಕನಕೋಡ ಗ್ರಾಮ ಪಂಚಾಯತ : ವಿಘ್ನೇಶ ಹೆಗಡೆ, ಆಯ್ಕೆಯಾಗಿದು ಇನ್ನಷು ಪಲಿತಾಂಶ ಮುಂದುವರಿದಿದೆ

ಹೊನ್ನಾವರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಿದ್ದಾ ಜಿದ್ದಿನ ಕಣವಾಗಿ ಬಿಂಬಿತ ವಾಗಿರುವ ಮಾವಿನಕುರ್ವಾದಲ್ಲಿ ಜಿ ಜಿ ಶಂಕರ ಗೆಲುವು. 173 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ ಸತೀಶ ಹೆಬ್ಬಾರ್ ನವಿಲಗೋಣ ಪಂಚಾಯತದಿಂದ ಸತತ 2ನೇ ಬಾರಿ ವಿಜಯ ಸಾಧಿಸಿದ್ದಾರೆ. ಸಾಲ್ಕೋಡ ಗ್ರಾಮ ಪಂಚಾಯಿತಿ ಕೆರೆಕೋಣ ವಾರ್ಡ್ನ ಗಣಪತಿಭಟ್ ಮತ್ತು ಆಶಾ ನಾಯಕ ಜಯಗಳಿಸಿದ್ದಾರೆ. ಹಳದೀಪುರ ಗ್ರಾ.ಪಂ ನ ಬರಗದ್ದೆ ವಾರ್ಡ ನ ಗೋವಿಂದ ಜೋಶಿ ಹಾಗೂ ಮಹೇಶ ನಾಯ್ಕ ಗೆಲುವು ಸಾಧಿಸಿದ್ದಾರೆ.

ಶಿರಸಿ ಗ್ರಾ.ಪಂ ಕ್ಷೇತ್ರದ ವಿವರ ಇಲ್ಲಿದೆ:

ಶಿರಸಿ: ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ವಾರ್ಡಿನಿಂದ ಸ್ಪರ್ಧಿಸಿದ್ದ ಪತ್ರಕರ್ತ ಸಂದೇಶ್ ಭಟ್ ಬೆಳಕಂಡ 262 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.
ಇಟಗುಳಿ ಪಂಚಾಯತ್ ವ್ಯಾಪ್ತಿಯ ಕಲಗಾರ ವಾರ್ಡ್ ನಿಂದ ಸ್ಪರ್ಧಿಸಿದ್ದ ರಮೇಶ ಗೋಪಾಲಕೃಷ್ಣ ನಾಯ್ಕ 173 ಮತಗಳನ್ನು ಪಡೆದು ಗೆಲುವು. ವಾನಳ್ಳಿ ಪಂಚಾಯತ್ ವ್ಯಾಪ್ತಿಯ ಮುಸ್ಕಿ ವಾರ್ಡಿನಿಂದ ಸ್ಪರ್ಧಿಸಿದ್ದ ಗೀತಾ ಮಂಜುನಾಥ ಸಿದ್ದಿ 174 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಹೆಡಿಗೆಮನೆ ವಾರ್ಡ್ ನಿಂದ ಸ್ಪರ್ಧಿಸಿದ್ದ ಮಧುಕರ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೈರುಂಬೆ ವಾರ್ಡಿನಿಂದ ಸ್ಪರ್ದಿಸಿದ್ದ ಕಿರಣ ಭಟ್ 197 ಮತಗಳಿಂದ ಗೆಲುವು ಸಾಧಿಸಿದ್ದಾರೆ,

ಇಟಗುಳಿ ಪಂಚಾಯತ್ ವ್ಯಾಪ್ತಿಯ ಇಟಗುಳಿ ವಾರ್ಡ್ ನಿಂದ ಸ್ಪರ್ಧಿಸಿದ್ದ ಶ್ರೀಕಲಾ ನಾಯ್ಕ 239 ಮತಗಳಿಂದ ಹಾಗೂ ಶ್ರೀಪತಿ ಹೆಗಡೆ 274 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹುಣ್ಸೇಕೊಪ್ಪ ಗ್ರಾಪಂ ವ್ಯಾಪ್ತಿಯ ಸಣ್ಣಳ್ಳಿ ವಾರ್ಡಿನಿಂದ ಸ್ಪರ್ಧಿಸಿದ್ದ ಪುರುಷೋತ್ತಮ ಜ ಕಲ್ಮನೆ 331 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬನವಾಸಿ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡಿನಿಂದ ಅಲ್ತಾಫ್ ಚೌದ್ರಿ 244 ಮತಗಳಿಂದ ಹಾಗೂ ರಹಮದ್ 202 ಮತಗಳಿಂದ ಗೆಲುವು.

ಸೋಂದಾ ಗ್ರಾ ಪಂ ವ್ಯಾಪ್ತಿಯ ಸೊಂದಾ ವಾರ್ಡಿನಿಂದ ಸ್ಪರ್ಧಿಸಿದ್ದ ಗಜಾನನ ನಾಯ್ಕ 367 ಹಾಗೂ ಮಂಜುನಾಥ ಭಂಡಾರಿ 355 ಗೆಲುವು. ಭಾರತಿ ಅಶೋಕ ಚನ್ಯಯ್ಯ 197 ಗೆಲುವು, ಮಠದೇವಳ ರಾಮಚಂದ್ರ ಹೆಗಡೆ, ಕುಮದ್ವತಿ ಗುಡಿಗಾರ್, ಮಮತಾ ಜೈನ್, ವೆಂಕಟ್ರಮಣ ಪೂಜಾರಿ ಗೆಲುವು, ಕುಳವೆ ಪಂಚಾಯತ್ ಗಂಗಾಧರ್ ನಾಯ್ಕ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಭಟ್ಕಳ ಗ್ರಾ.ಪಂ ಅಭ್ಯರ್ಥಿಗಳ ವಿವರ:

ಭಟ್ಕಳ:ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಕ್ಕೋಡ್ ವಾರ್ಡ ಅಭ್ಯರ್ಥಿ ನಾರಾಯಣ ಮರಾಠಿ ಮೂರು ಮತಗಳ ಅಂತರದಲ್ಲಿ ವಿಜಯವನ್ನು ಸಾಧಿಸಿದ್ದಾರೆ. ಕಾಯ್ಕಿಣಿ ಪಂಚಾಯತ್ ವ್ಯಾಪ್ತಿಯ ಅಭ್ಯರ್ಥಿ 235 ಮತಗಳ ಅಂತರದಲ್ಲಿ ಶಬರೀಷ್ ವಿಜಯವನ್ನು ಸಾಧಿಸಿದ್ದಾರೆ. ಕೋಣಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹದ್ಲೂರ್ ವಾರ್ಡಿನ ನಾಗಪ್ಪ ಗೊಂಡ 11 ಮತಗಳ ಅಂತರದಲ್ಲಿ ಗೆಲುವು. ಬೈಲೂರು ಗ್ರಾಮ ಪಂಚಾಯತ್ ದೊಡ್ಡಬಲಸೆ ವಾರ್ಡ ಸಾಮಾನ್ಯ ಕ್ಷೇತ್ರ ಕ್ರಷ್ಣ ಬೈರಯ್ಯ ನಾಯ್ಕ -ಗೆಲುವು.
ಮಾವಿನಕುರ್ವೆ ಗ್ರಾಮ ಪಂಚಾಯತ್ : ತಲಗೋಡ ವಾರ್ಡ , ದಾಸ ನಾಯ್ಕ – 432 ಮತ ಗಳಿಕೆ , 162 ಮತಗಳ ಅಂತರದ ಗೆಲುವು. ಮುಂಡಳ್ಳಿ ಗ್ರಾಮ ಪಂಚಾಯತ್: ಪರಮೇಶ್ವರಿ ಕುಪ್ಪಯ್ಯ ಹಳ್ಳೇರಗೆ ಜಯ..

ಶಿರಾಲಿ ಗ್ರಾಮ ಪಂಚಾಯತ್ ಕೇಸುಮನೆ ವಾರ್ಡ ಅಲ್ಲಿ ಬಿಸಿಎಮ್ ಅಭ್ಯರ್ಥಿ ಜನಾರ್ದನ್ ದೇವಾಡಿಗ 410 ರಲ್ಲಿ 110 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ
ಹಾಗು ಕೆಸುಮನೆಸಾಮಾನ್ಯ ಅಭ್ಯರ್ಥಿ ಪುಣ್ಯವತಿ ದೇವಾಡಿಗ 300 ರಲ್ಲಿ 40 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ

ಹಾಗು ಕೇಸುಮನೆ ಅಭ್ಯರ್ಥಿ ನಾಗರಾಜ ನಾರಾಯಣ ದೇವಾಡಿಗ 84 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮುಂಡಳ್ಳಿ ಗ್ರಾಮ ಪಂಚಾಯತ್ಶಿರಾಲಿ ಗ್ರಾಮ ಪಂಚಾಯತ್ ಕೇಸುಮನೆ ವಾರ್ಡ ಅಲ್ಲಿ ಬಿಸಿಎಮ್ ಅಭ್ಯರ್ಥಿ ಜನಾರ್ದನ್ ದೇವಾಡಿಗ 410 ರಲ್ಲಿ 110 ಅಂತರದಲ್ಲಿ ಗೆಲುವು .

ಹಾಗು ಕೆಸುಮನೆಸಾಮಾನ್ಯ ಅಭ್ಯರ್ಥಿ ಪುಣ್ಯವತಿ ದೇವಾಡಿಗ 300 ರಲ್ಲಿ 40 ರ ಅಂತರದಲ್ಲಿ ಗೆಲುವು. ಹಾಗು ಕೇಸುಮನೆ ಅಭ್ಯರ್ಥಿ ನಾಗರಾಜ ನಾರಾಯಣ ದೇವಾಡಿಗ 84 ರ ಅಂತರದಲ್ಲಿ ಜಯ.
ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು .

ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು ಸಾದಿಸಿದ್ದಾರೆ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ

ಯಲ್ಲಾಪುರದ ಮತ ಎಣಿಕೆ ವಿವರ

ಯಲ್ಲಾಪುರ:ವಜ್ರಳ್ಳಿ ಗ್ರಾ.ಪಂಕ್ಕೆ ಕಳಚೆಯಿಂದ ಸ್ಪರ್ಧಿಸಿದ ಗಜಾನನ ಭಟ್, ವೀಣಾ ಗಾಂವ್ಕಾರ, ಆನಗೋಡ ಗ್ರಾ.ಪಂದಲ್ಲಿ ಕೆ.ಟಿ.ಹೆಗಡೆ, ರಾಮಕೃಷ್ಣ ಅಳವೆಗದ್ದೆ, ನಂದೊಳ್ಳಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ದೇವರಗದ್ದೆ- ರಾಮಕೃಷ್ಣ ಭಾಗ್ವತ, ಭವಾನಿ ಸಿದ್ದಿ, ಇಡಗುಂದಿ ಗ್ರಾ.ಪಂಕ್ಕೆ ಅರಬೈಲ್ ವಿಶ್ವೇಶ್ವರ ಹೆಗಡೆ, ಬೀರಗದ್ದೆ ನಾಗವೇಣಿ ಗೌಡ, ಕೊಡ್ಲಗದ್ದೆ ಮುತ್ತವ್ವ ಶಿರಹಟ್ಟಿ, ಕಂಪ್ಲಿ ಗ್ರಾ.ಪಂಕ್ಕೆ ಸ್ಪರ್ಧೆಸಿದ ಚಿಕ್ಕೊತ್ತಿಯ ಸದಾಶಿವ ಚಿಕ್ಕೊತ್ತಿ, ರೇಣುಕಾ ಬೋವಿಡ್ಡರ್, ಕುಂದರಗಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ, ಕಿರವತ್ತಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ರೆಹಮತ್ ಅಬ್ಬಿಗೇರಿ, ಕರಿಬಸಪ್ಪ ಉಪ್ಪಿನ, ತೆರೆಜಾ ಫರ್ನಾಂಡೀಸ್, ರೇಣುಕಾಪ ಹೋಳಿ, ಜಾನು ಪಾಂಡ್ರಮೀಸೆ, ಸಂಗೀತಾ ಕೊಕರೆ, ಹನುಮವ್ವ ಭಜಂತ್ರಿ, ಮದನೂರು ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ಡೊಮಗೇರಿ- ಲಕ್ಕು ಗಾವಡೆ, ಪ್ರಭಾ ನಾಯ್ಕ, ನಂದೊಳ್ಳಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ನಂದೊಳ್ಳಿ- ನರಸಿಂಹ ಕೋಣೆಮನೆ, ನಾಗರತ್ನಾ ನಾಯ್ಕ, ಚಂದಗುಳಿ ಗ್ರಾ.ಪಂದಿಂದ ಹುತ್ಕಂಡ- ಆರ್.ಎಸ್.ಭಟ್, ನೇತ್ರಾವತಿ ಹೆಗಡೆ, ರೇಣುಕಾ ಸಿದ್ದಿ, ಹಾಸಣಗಿ ಗ್ರಾ.ಪಂದಿಂದ ಶಿರನಾಲಾ- ಪರಮೇಶ್ವರ ಸಿದ್ದಿ, ಎಮ್.ಕೆ ಭಟ್ಟ ಯಡಳ್ಳಿ, ಉಮ್ಮಚಗಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ಚವತ್ತಿ ಗಂಗಾ ಹೆಗಡೆ, ಶಿವರಾಯ ಪೂಜಾರಿ, ಕಣ್ಣಿಗೇರಿ ಗ್ರಾ.ಪಂ ದಿವ್ಯಾ ಮರಾಠಿ, ಜ್ಯೋತಿ ಸಿದ್ದಿ, ತಿಮ್ಮಾ ಮರಾ ವಿಜಯ ಸಾಧಿಸಿದ್ದಾರೆ.ಈವರೆಗೆ ಇವರೆಲ್ಲ ವಿಜಯದ ನಗೆ ಬೀರಿದ್ದು, ಮುಂದಿನ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಕಾರವಾರ ತಾಲೂಕಿನ ಈ ವರೆಗಿನ ಎಣಿಕೆಯಲ್ಲಿ ಗೆದ್ದ ಅಭ್ಯರ್ಥಿಗಳು

ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಘಾಡಸಾಯಿ ಗ್ರಾಮ ಪಂಚಾಯತ್ ಹಳಗೆಜು ಕ್ಷೇತ್ರದಿಂದ ಅವಿನಾಶ್ ಕೊಟಾರಕರ್, ದೇವಾಳಮಕ್ಕಿ ಗ್ರಾಮ ಪಂಚಾಯತ್ ನೈತಿಸವಾರ್ ಕ್ಷೇತ್ರದಿಂದ ಕೋಮಲ ಕೃಷ್ಣನಂದ ದೇಸಾಯಿ ಹಾಗೂ ಸಂತೋಷ್ ಬಾಂದೇಕರ್, ಶಿರವೆ ಕ್ಷೇತ್ರದಿಂದ ಶ್ರೀಪಾದಗೌಡ, ಠಾಕು ಗೌಡ, ಬರಗಲ್ ಕ್ಷೇತ್ರದಿಂದ ಸಂಗೀತಾ ಅ. ಹುಲಸವಾರ್, ಬೇಳೂರು ಕ್ಷೇತ್ರದಿಂದ ಸುವರ್ಣಾ ಗಾಂವಕರ್ ಹಾಗೂ ಸಂತೋಷ್ ಗಾಂವಕರ್ ಆಯ್ಕೆಯಾಗಿದ್ದಾರೆ.ಚಿತ್ತಾಕುಲ ಗ್ರಾಪಂನ ಕೊಂಕಣವಾಡ ಕ್ಷೇತ್ರದಿಂದ ಅಶೋಕ ಕೊಯರ್ ರಾಣೆ ಹಾಗೂ ಗೋಪಿಕಾ ಮಂಜುನಾಥ ಮಡಕೆಕರ್, ಚಿಂಚೇವಾಡ ಕ್ಷೇತ್ರದಿಂದ ಕಿಶೋರ್ ಸದಾನಂದ ದೇಸಾಯಿ ಹಾಗೂ ಗಾಯತ್ರಿ ಉಲ್ಲಾಸ್ ಕದಮ ಗೆಲುವನ್ನು ಸಂಭ್ರಮಿಸಿದ್ದಾರೆ.

ವೈಲವಾಡ ಗ್ರಾಮ ಪಂಚಾಯತದ ಖರ್ಗೆಜು ಕ್ಷೇತ್ರದಿಂದ ರಾಜೇಶ್ ನಾಯ್ಕ್, ಕೆರವಾಡಿ ಗ್ರಾಮ ಪಂಚಾಯತದ ಕಡಿಯೆ ಕ್ಷೇತ್ರದಿಂದ ಬಾಲಚಂದ್ರ ನಾರಾಯಣ ಕಾಮತ್, ಮೂಡಗೇರಿ ಗ್ರಾಪಂದ ಅಂಗಡಿ ಕ್ಷೇತ್ರದಿಂದ ಸುರೇಂದ್ರ ಗಾಂವಕರ್, ಮಲ್ಲಾಪುರ ಗ್ರಾಮ ಪಂಚಾಯತ್ ದೇವಗಿರಿ ಕ್ಷೇತ್ರದಿಂದ ಚಂದ್ರಶೇಖರ ಗಣಪತಿ ಬಾಂದೇಕರ್, ಕೈಗಾದಿಂದ ಸುಜಾತ ಶಾಂತಾರಾಮ ಕುಣಬಿ, ಕುಚೇಗಾರ್ ಕ್ಷೇತ್ರದಿಂದ ಸಂತೋಷ ಪ್ರಕಾಶ ದೇವಳಿ ಗೆದ್ದಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button