Follow Us On

WhatsApp Group
Big News
Trending

ಮದುವೆಗೆ ಕೆಲವೇ ಗಂಟೆ ಬಾಕಿಯಿತ್ತು: ವಧುವಿನ ಮನೆ ಮೇಲೆ ಗುಂಡಿನ ದಾಳಿ

ಗುಂಡು ಹೊಡೆದಿರುವುದಾಗಿ ಕೂಗಿಕೊಂಡ ಮದುಮಗಳು
ಕೋಣೆಯ ಕಿಟಕಿ ಕೆಳಗೆಬಿದ್ದ ಗುಂಡು

ಅಂಕೋಲಾ: ಇಡೀ ಮನೆ ಮದುವೆಯ ಸಂಭ್ರಮದಲ್ಲಿತ್ತು. ವಿವಾಹಕ್ಕೂ ಕೆಲವೇ ಗಂಟೆಗಳು ಬಾಕಿಯಿತ್ತು. ಆದರೆ, ಮದುವೆಯ ಮನೆಯ ಕಿಟಕಿಗೆ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಮದುವೆ ಮನೆಯಲ್ಲಿದ್ದ ಸಂಭ್ರಮ ಮಾಯವಾಗಿ, ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮದುವೆ ಮನೆಯೊಂದರಲ್ಲಿ ಅಪರಿಚಿತರು ಗುಂಡು ಹಾರಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ಗುಂಡಿನ ದಾಳಿ ಹಿನ್ನೆಲೆ ಅವರ್ಸಾದ ಖಾಸಗಿ ಸಭಾ ಭವನದಲ್ಲಿ ಬಿಗಿ ಪೊಲೀಸ್​ ಭದ್ರತೆಯಲ್ಲಿ ಮದುವೆ ನೆರವೇರಿದೆ.

ಅಂಕೋಲಾದ ಅವರ್ಸಾ ಗ್ರಾಮದ ಇಂದು ವಧು ದಿವ್ಯಾ ಮತ್ತು ಪ್ರಕಾಶ ಅವರ ಮದುವೆ ಏರ್ಪಡಿಸಲಾಗಿತ್ತು. ಇಡೀ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ, ದಿಢೀರ್ ಆಗಿ ಕೇಳಿಸಿಕೊಂಡ ಗುಂಡಿನ ಸದ್ದಿಗೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಆರಂಭದಲ್ಲಿ ಯಾವುದೋ ಮೊಬೈಲ್ ಸ್ಫೋಟಗೊಂಡಿದೆ ಎಂದುಕೊAಡು, ಸ್ವಲ್ಪ ಆತಂಕಗೊAಡಿದ್ದರು. ಆದರೆ, ಮದುಮಗಳು ಯಾರೋ ಗುಂಡು ಹೊಡೆದಿರುವುದಾಗಿ ಕೂಗಿಕೊಂಡಿದ್ದು, ಎಲ್ಲರೂ ಆತಂಕಕ್ಕೊಳಗಾಗಿದ್ದಾರೆ.

ಮದುಮಗಳು ಇದ್ದ ಕೋಣೆಯ ಕಿಟಕಿ ಬಳಿ ಗುಂಡು ಬಿದ್ದಿದ್ದು, ಅದೃಷ್ಟವಶಾತ್ ವಧು ಪಾರಾಗಿದ್ದಾರೆ. ತಕ್ಷಣ ಹೊರಗೆ ಹೋಗಿ ನೋಡಿದರೂ ಯಾರ ಸುಳಿವು ಪತ್ತೆಯಾಗಿಲ್ಲ. ಮನೆಯವರು ಇನ್ನು ಗುಂಡಿನ ದಾಳಿ ನಡೆಸಿದವರ ಪತ್ತೆಗೆ ಕುಟುಂಬಸ್ಥರು ಆಗ್ರಹಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಅಂಕೋಲಾ

ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ

ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990

Back to top button