ಅಪ್ಪಣ್ಣ ಕಾಂಬಳೆ ವಿಧಿವಶ

ತಾ.ಪಂ. ಮಾಜಿ ಉಪಾಧ್ಯಕ್ಷ ಮತ್ತು ಭಾವಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ
ಗಾಬಿತ ಸಮಾಜದ ಪ್ರಭಾವಿ ಧುರೀಣ

ಅಂಕೋಲಾ : ಗಾಬಿತ ಸಮಾಜದ ಪ್ರಭಾವಿ ಧುರೀಣರೂ, ಸಾಮಾಜಿಕ ಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದ್ದ ಗಾಬಿತಕೇಣಿಯ ಅಪ್ಪಣ್ಣ ಮಹಾಬಲೇಶ್ವರ ಕಾಂಬಳೆ ಸೋಮವಾರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.ಈ ಹಿಂದೆ ಅಂಕೋಲಾ ತಾಲೂಕು ಪಂಚಾಯತ ಉಪಾಧ್ಯಕ್ಷರಾಗಿ ಹಾಗೂ ಭಾವಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಪ್ಪಣ್ಣ ಕಾಂಬಳೆ ತನ್ನ ಜನಪರ ನಿಲುವಿನ ಮೂಲಕ ತಾಲೂಕಿನಾದ್ಯಂತ ಪರಿಚಿತರಾಗಿದ್ದರು.

ಊರವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದ ಕಾಂಬಳೆ ವಿಧಿವಶವಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾದಂತಾಗಿದೆ. ದಿ. ಆರ್.ಎನ್. ನಾಯಕ ಕುಟುಂಬದ ಒಡನಾಡಿಗಳಲ್ಲಿ ಒಬ್ಬರಾಗಿದ್ದ ಕಾಂಬಳೆ, ಕುಬೇರ ಎಂಟರಪ್ರೆöÊಸಸ್‌ನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಪ್ಪಣ್ಣ ಕಾಂಬಳೆ ನಿಧನಕ್ಕೆ ತಾಲೂಕಿನ ಮತ್ತು ಜಿಲ್ಲೆಯ ವಿವಿಧ ಗಣ್ಯರು, ಒಡನಾಡಿಗಳು ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್ , ವಿಲಾಸ ನಾಯಕ, ಅಂಕೋಲಾ

Exit mobile version