Follow Us On

WhatsApp Group
Trending

ಗೋಕರ್ಣದ ಬಗ್ಗೆ ನಟ ಅನಿರುದ್ಧ ಮಾಡಿದ ಫೋಸ್ಟ್ ವೈರಲ್:ಗೋಕರ್ಣ ಪಂಚಾಯತ್ ಗೆ ಅವರು ಮಾಡಿದ ಮನವಿ ಏನು?

ಗೋಕರ್ಣ: ಖ್ಯಾತ ಚಲನಚಿತ್ರನಟ ಅನಿರುದ್ಧ ಅವರು ಗೋಕರ್ಣ ಪಂಚಾಯತ್ ಮತ್ತು ಇಲ್ಲಿನ‌ ಜನಪ್ರತಿನಿಧಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಹೌದು ಸ್ವಚ್ಛತೆಗಾಗಿ ನಾನು ಸಹಭಾಗಿ ಎಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ್ ನ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಹಾಕಿ ದನಗಳು ಇದನ್ನು ಲತಿಂದು ಸಾಯುವ ಹಾಗೇ ಆಗ್ತಾ ಇದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಮಾಡುತ್ತೇನೆ ಎಂದಿದ್ದಾರೆ.

ಇದಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಪ್ರತಿಕ್ರಿಯಿಸಿದ್ದಾರೆ. ಧನ್ಯವಾದಗಳು ಸರ್. ಈ ರೀತಿ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಮೊದಲು ತಡೆಗಟ್ಟಬೇಕು. ಇದರಿಂದ ಪ್ರಾಣಿಗಳ ಜೀವಕ್ಕೆ ತೊಂದರೆಯಾಗುತ್ತಿದೆ. ಜನರು ಇದರ ಬಗ್ಗೆ ನಿಗಾವಹಿಸಬೇಕು. ಕೇವಲ ಸ್ವಚ್ಛತೆಗಾಗಿ ನಾವು ಭಾಗಿ ಅಂತ ಸುಮ್ಮನೆ ಹೇಳುವುದಲ್ಲ. ಅದನ್ನು ಕಾರ್ಯರೂಪಕ್ಕೆ ತರಬೇಕು. ದಯವಿಟ್ಟು ಆ ಊರಿನ ಜನರು, ಹಾಗೂ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button