Follow Us On

WhatsApp Group
Focus News
Trending

ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ: ಏಳು ಜನರ ರಕ್ಷಣೆ

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗುತ್ತಿದ್ದಾಗ ಏಳು ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.ಮಲ್ಪೆ ಮೂಲದ ದಿನಕರ ಕರಿಕಲ್ ಎಂಬುವವರಿಗೆ ಸೇರಿದ ಶ್ರೀ ಸೌಪರ್ಣಿಕ ಹೆಸರಿನ ಬೋಟ ಮೀನುಗಾರಿಕೆಗೆ ತೆರಳಿತ್ತು. ಬೋಟನಲ್ಲಿ ಏಳು ಮೀನುಗಾರರು ಮೀನುಗಾರಿಕೆ ನಡೆಸುತ್ತ ಕಾರವಾರದಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದಲ್ಲಿರುವ ಲೈಟ್ ಹೌಸ್ ಬಳಿ ಬಂದಾಗ ಬೋಟಿನ ತಳಪಾಯ ಒಡೆದು ನೀರು ಬೋಟ್ ಒಳಗೆ ಸೇರತೊಡಗಿತ್ತು. ತಕ್ಷಣ ಮೀನುಗಾರರು ಸಹಾಯಕ್ಕಾಗಿ ಕರಾವಳಿ ಕಾವಲು ಪೊಲೀಸರಲ್ಲಿ ವಿನಂತಿಸಿದ್ದರು. ತಕ್ಷಣ ನೆರವಿಗೆ ಧಾವಿಸಿದ ಸಿಬ್ಬಂದಿ ಏಳು ಮೀನುಗಾರರನ್ನು ರಕ್ಷಣೆ ಮಾಡಿ ಬೋಟನ್ನು ಎಳೆದು ತಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಸ್ಮಯ ನ್ಯೂಸ್ ಕಾರವಾರ

Back to top button