Follow Us On

WhatsApp Group
Important
Trending

ಗನ್ ಮಾದರಿ ಲೈಟರ್ ಅನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಶಾಸಕರ ಗನ್ ಮ್ಯಾನ್ ಎಂದು ಹೇಳಿಕೊಂಡು ವಂಚನೆ: ಖತರ್ನಾಕ್ ನಕಲಿ ಗನ್ ಮ್ಯಾನ್ ಸೆರೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸುತ್ತಿದ್ದ
ಯುವಕನಿoದ ಹಣ ಪಡೆದ ಬಳಿಕ ನಾಪತ್ತೆಯಾಗಿದ್ದ

ಕಾರವಾರ: ಶಾಸಕರ ಗನ್ ಮ್ಯಾನ್ ಎಂದು ಹೇಳಿಕೊಂಡು ಉದ್ಯೋಗ ಕೋಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ನಕಲಿ ಪೊಲೀಸ್ ಪೇದೆಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗನ್ ಮಾದರಿ ಲೈಟರ್ ಅನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಗನ್ ಮ್ಯಾನ್ ನಂತೆಯೇ ಪೋಸ್ ಕೊಡುತ್ತಿದ್ದ. ಈತ ಉತ್ತರಕನ್ನಡ, ಬೆಂಗಳೂರು, ದಾವಣಗೆರೆ ಹೀಗೆ ಹಲವೆಡೆ ಗನ್ ಮ್ಯಾನ್ ನಂತೆಯೇ ವೇಷ ಧರಿಸಿ ಓಡಾಡುತ್ತಾ ಮೋಸ ಮಾಡುತ್ತಿದ್ದ. ©Copyright reserved by Vismaya tv . ಉತ್ತರಕನ್ನಡ ಜಿಲ್ಲೆಯ ಶಿರಸಿ ಮಳಲಗಾವ್ ಗ್ರಾಮದ ನಾರಾಯಣ ರಾಮಚಂದ್ರ ಹೆಗಡೆ ಬಂಧಿತ ಆರೋಪಿ.

ಇತ್ತಿಚಿಗೆ ದಾವಣೆಗೆರೆ ಯುವಕನೊಬ್ಬನಿಗೆ ದಾವಣಗೆರೆ ಶಾಸಕರ ಗನ್ ಮ್ಯಾನ್ ಎಂದು ನಂಬಿಸಿ, ಆತನಿಗೆ ಪೊಲೀಸ್ ಇಲಾಖೆ ಅಥವಾ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. 20 ಸಾವಿರ ರೂಪಾಯಿಯನ್ನು ಆತನಿಂದ ಪಡೆದು, ಆತನ ಅಂಕಪಟ್ಟಿ, ಆಧಾರ್ ಕಾರ್ಡ್, ಪಡಿತರ ಮುಂತಾದ ದಾಖಲೆಗಳನ್ನು ಪಡೆದುಕೊಂಡು ಬಂದಿದ್ದ. ಬಳಿಕ ಎಷ್ಟೆ ಸಲ ದೂರವಾಣಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಕೆಲ ಸಮಯದ ಬಳಿಕ ತಾನು ಮೋಸ ಹೋಗಿರುವುದು ದಾವಣಗೆರೆ ಯುವಕನಿಗೆ ತಿಳಿದಿದೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ನಾರಾಯಣ ಹೆಗಡೆ ಕೇವಲ ಈ ದಾವಣಗೆರೆ ಯುವಕನಿಗೆ ಮಾತ್ರವಲ್ಲ ಇನ್ನು ಹಲವರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಒಂದೊoದು ಕ್ಷೇತ್ರಕ್ಕೆ ತೆರಳುತ್ತಿದ್ದ ಈತ ಅದೇ ಕ್ಷೇತ್ರದ ಶಾಸಕರ ಗನ್ ಮ್ಯಾನ್ ಎಂದು ಹೇಳಿ ಯಾಮಾರಿಸುತ್ತಿದ್ದ. ಈಗ ಈತನ ಬಂಡವಾಳ ಬಯಲಾಗಿದ್ದು, ಠಾಣೆಯಲ್ಲಿ ಮತ್ತಷ್ಟು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಪಿಯುಸಿ ವ್ಯಾಸಾಂಗ ಮಾಡಿರುವ ನಾರಾಯಣ ಹೆಗಡೆ, ಮೋಸ ಮಾಡಿ, ಹಣ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದ ಎನ್ನಲಾಗಿದೆ.

ನಿಮ್ಮ ಜೀವನದ ತೊಂದರೆಗಳಾದ ಮಾಟ ಮಂತ್ರ, ಕೆಟ್ಟ ಚಾಳಿ, ಪ್ರೇಮ ಕಲಹ, ದಾಂಪತ್ಯ ಕಲಹ, ಕುಟುಂಬ ತೊಂದರೆ, ವ್ಯವಹಾರದ ತೊಂದರೆ, ಬೋಟಿನ ತೊಂದರೆ, ದೋಣಿಯ ತೊಂದರೆ,ಹಾಗೂ ಇತರೆ ತೊಂದರೆಗೆ ಪರಿಹಾರ ಮಾಡಿಕೊಡಲಾಗುವುದು. ಇದರಲ್ಲದೆ ಮನೆಗೆ ರಕ್ಷಣೆಯ ಕಾಯಿ, ಮಕ್ಕಳಿಗೆ ಯಂತ್ರ ಮಾಡಿಕೊಡಲಾಗುವುದು ಮತ್ತು ಬಾವಿಯ ಜಲ ತೋರಿಸುದು ,ಮನೆ ಕಟ್ಟಲು ಸೂಕ್ತ ವಾದ ಸ್ಥಳ ಗುರುತಿಸಿಕೊಡಲಾಗುವುದು ಹಾಗೂ ಮನೆಯಲ್ಲಿ ನಾಗ ಚೌಡಿ ಇತರೆ ಯಾವುದೇ ನಡೆಗಲು ಇದ್ದರೆ ತಪ್ಪಿಸಿಕೊಡಲಾಗುದು ಹಾಗೂ ನಿಮ್ಮ ಸಮಸ್ಯೆಗಳಿಗೆ ಪ್ರತಿ ಶನಿವಾರ ದೇವಿಯ ದರ್ಶನ ಬರುವುದರೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ: 7848019996, ಶ್ರೀ ಮಂಜುನಾಥ ಭವಿಷ್ಯ ಕೇಂದ್ರ, ದುರ್ಗಾ ಚಾಮುಂಡೇಶ್ವರಿ ನಾಗಮಾಸ್ತಿ ಆರಾಧಕ , ಅಶೋಕ ನಾಯ್ಕ ಜನತಾ ವಿದ್ಯಾಲಯ ಇದುರಿನ ರಸ್ತೆ ಗುಡ್ಡಹಿತ್ಲು ಶಿರಾಲಿ, ಭಟ್ಕಳ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button