Follow Us On

WhatsApp Group
Big News
Trending

ಹೂವು ಮಾರುವ ನೆಪದಲ್ಲಿ ಮಾಹಿತಿ ಕಲೆಹಾಕಿ ಕಳ್ಳತನ: ಮನೆಯಲ್ಲಿದ್ದ ಸೇಬು ತಿನ್ನುತ್ತಾ ಸಿಕ್ಕಿಬಿದ್ದ ಕಳ್ಳರು!

ಹೂವು ಮಾರುವ ನೆಪದಲ್ಲಿ ಮಾಹಿತಿ ಕಲೆಹಾಕುತ್ತಿದ್ದ ಮಹಿಳೆ
ಸಿನಿಮಾ ಸ್ಟೈಲ್ ನಲ್ಲಿ
ಕಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು
ಕಳ್ಳತನಕ್ಕೆ ಹೋದ ವೇಳೆ ಮನೆಯಲ್ಲಿದ್ದ ಸೇಬು ತಿನ್ನುತ್ತಾ ಸಿಕ್ಕಿಬಿದ್ದ !
17 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಹೂವು ಮಾರುವ ನೆಪದಲ್ಲಿ ಒಂಟಿ ಮನೆಗಳನ್ನು ಗುರುತಿಸಿ, ಸಿನಿಮಾ ಸ್ಟೈಲ್ ನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗುಂಪು ಈಗ ನೆಲಮಂಗಲ ಪೊಲೀಸರ ಅತಿಥಿಯಾಗಿದೆ. ಹೌದು, ಈ ಗುಂಪಿನ ಸದಸ್ಯರು, ಹೂವು ಮಾರುವ ನೆಪದಲ್ಲಿ ಮೊದಲು ಐಷಾರಾಮಿ ಒಂಟಿಮನೆಗಳನ್ನು ಗುರುತಿಸುತ್ತಿದ್ದರು. ಆ ಮನೆಯ ಸಂಪೂರ್ಣ ಮಾಹಿತಿ ಕಲೆಹಾಕಿದ ಬಳಿಕ ಕಳ್ಳತನಕ್ಕೆ ಸ್ಕೆಚ್ ರೆಡಿಯಾಗುತ್ತಿತ್ತು. ಈಗ ಸಿಕ್ಕಿಬಿದ್ದ ಕಳ್ಳರ ಗುಂಪು ಇದುವರೆಗೂ 50 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದೆ. ಯಾವ ಮನೆಯ ಬಾಗಿಲು ಮೂರ್ನಾಲ್ಕು ದಿನದಿಂದ ತೆಗೆದಿರುತ್ತಿರಲಿಲ್ಲ. ಯಾವ ಮನೆಯ ಮುಂದೆ ದಿನಪತ್ರಿಕೆ ಹಾಗೆ ಬಿದ್ದಿದೆ. ಯಾವ ಮನೆಯ ಮುಂದೆ ಕಸ ಗುಡಿಸಿಲ್ಲ ಎನ್ನುವುದನ್ನು ಗಮನಿಸಿ ಈ ಮಾಹಿತಿಯನ್ನ ತನ್ನ ಗ್ಯಾಂಗ್‌ಗೆ ತಿಳಿಸುತ್ತಿದ್ದಳು.


ಯಾರಿಗೂ ಅನುಮಾನ ಬಾರದಿರಲಿ ಎಂದು ಮಹಿಳೆಯನ್ನೇ ಹೂವು ಮಾರಲು ಕಳುಹಿಸಲಾಗುತ್ತಿತ್ತು. ಹೂವು ಬೇಕಾ ಎಂದು ಕೇಳುತ್ತ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಹಿಳೆ, ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದಳು. ಹೀಗೆ ಮಾಹಿತಿ ಕಲೆಹಾಕಿದ ಬಳಿಕ ಇತ್ತಿಚೆಗೆ ನೆಲಮಂಗಲ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದರು. ಆದರೆ, ಈ ಯೋಜನೆ ಅವರಿಗೆ ಮುಳುವಾಗಿದೆ.
ಹೌದು, ಕಳ್ಳತನ ಮಾಡುತ್ತಿರುವ ವೇಳೆ ಮನೆಯ ಮಾಲಿಕ ಒಳಗೆ ಬಂದಿದ್ದಾನೆ. ಈ ವೇಳೆ ಮನೆಯ ಹೊರಗಿದ್ದ ಕಳ್ಳ ಪರಾರಿಯಾಗಿದ್ದಾನೆ.

ಆದರೆ, ಇನ್ನೊಬ್ಬ ಕಳ್ಳ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಪರಾರಿಯಾಗಿದ್ದಾನೆ. ಆದರೆ ಮದಿರೆ ಮತ್ತಿನಲ್ಲಿದ್ದ ಇನ್ನೊಬ್ಬ ಕಳ್ಳ ಯಾವ ಪರಿವೆಯೇ ಇಲ್ಲ ಎನ್ನುವಂತೆ ಮನೆಯ ಫ್ರಿಡ್ಜ್ನಲ್ಲಿದ್ದ ಸೇಬುಹಣ್ಣನ್ನು ತಿನ್ನುತ್ತಾ ಕುಳಿತ್ತಿದ್ದ. ಇದನ್ನು ಕಂಡ ಮಾಲೀಕ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ, 17 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಕಳ್ಳರ ಮತ್ತಷ್ಟು ದುಷ್ಕೃತ್ಯಗಳು ಹೊರಬರುವ ಸಾಧ್ಯೆತೆಯಿದೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ರಮೇಶ್ ಕುಮಾರ್, ವಿಸ್ಮಯ ನ್ಯೂಸ್, ಬೆಂಗಳೂರು

Back to top button