ವ್ಯವಸ್ಥಾಪಕರ ವರ್ಗಾವಣೆ ಹಾಗೂ ಸಹಾಯಕ ನಿರ್ದೇಶಕರ ನಿವೃತ್ತಿಯ ಬಿಳ್ಕೋಡುಗೆ ಸಮಾರಂಭ

ಭಟ್ಕಳ: ಸರ್ಕಾರಿ ನೌಕರನಾದವನು ಸದಾ ಕ್ರಿಯಾಶೀಲನಿದ್ದು, ಅಧ್ಯಯನ ಶೀಲತೆ, ಸಾರ್ವಜನಿಕರೊಂದಿಗೆ ಸೌಜನ್ಯ ಶೀಲತೆ ಬೆಳೆಸಿಕೊಂಡಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಭಟ್ಕಳ ತಾಲೂಕ ಪಂಚಾಯತ ವ್ಯವಸ್ಥಾಪಕರಾಗಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ವರ್ಗಾವಣೆಗೊಂಡ, ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಧೀರ್ ಗಾವಂಕರ್ ರವರು ಅಭಿಪ್ರಾಯ ಪಟ್ಟರು. ಅವರು ಭಟ್ಕಳ ತಾಲೂಕ ಪಂಚಾಯತ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ನೌಕರರು ಏರ್ಪಡಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ನೌಕರರಾದವರು ತನಗೆ ವಹಿಸಿದ ಕೆಲಸ ಬಗ್ಗೆ ಅಸಡ್ಡೆ ತೋರದೆ ಅದಕ್ಕೆ ಗೌರವಕೊಟ್ಟು ಅದರಲ್ಲೇ ತಲ್ಲೀನರಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೆಲಸದ ಸ್ಥಾನ-ಮಾನ, ತನ್ನ ಸ್ಥಾನಮಾನವನ್ನು ಲೆಕ್ಕಿಸದೇ ಕಾಯಕದಲ್ಲೇ ಕೈಲಾಸ ಕಾಣುವ ಮನೋಧರ್ಮ ಅವನನ್ನು ಎತ್ತರಕ್ಕೇರಿಸುತ್ತದೆ. ನೌಕರನಾದವನು ಕಾಲಕಾಲಕ್ಕೆ ಪುನರಮನನಕ್ಕೆ ತೊಡಗಿಸಿಕೊಂಡು ಸಮಕಾಲಿನ ಸಮಸ್ಯೆಗಳ ಪರಿಹಾರೋಪಾಯಕ್ಕೆ ಸಿದ್ಧನಾಗಬೇ -ಕಾದ ಅವಶ್ಯವಿದೆ ಎಂದರಲ್ಲದೆ ತನ್ನ ಸುಧೀರ್ಘ ಒಂದುವರೆ ದಶಕದ ಕಾರ್ಯನಿರ್ವಹಣೆಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಎಸ್. ಚಿಕ್ಕನ್ಮನೆ ರವರು ಸುಧೀರ ಗಾಂವಕರ್ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಷಯದಲ್ಲಿ ತಜ್ಞರಾಗಿದ್ದು, ಯಾವುದೇ ಗಂಭೀರ ಸಮಸ್ಯೆಗಳನ್ನು ಲೀಲಾಜಾಲವಾಗಿ ಪರಿಹರಿಸುವ ಚಾಕಚಕ್ಯತೆ ಹೊಂದಿದವರಾಗಿದ್ದು ಅವರ ಸೇವೆಯಿಂದ ವಂಚಿತರಾಗುತ್ತಿರುವದು ನೋವಿನ ವಿಷಯವಾದರೂ ನಮ್ಮ ಮೇಲಿನ ಕಾರ್ಯಲಯದಲ್ಲಿ ಕೆಲಸ ನಿರ್ವಹಿಸುವ ಅವಕಾಶ ದೊರಕಿರುವುದು ಸೌಭಾಗ್ಯವೆಂದರು.

ನಿವೃತ್ತಿಗಾಗಿ ಗೌರವಿಸಲ್ಪಟ್ಟ ನರೇಗಾ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ರವರು ಮಾತನಾಡಿದರು. ವರ್ಗಾವಣೆಗೊಂಡ ಪಂಚಾಯತ ಅಭಿವೃದ್ಧಿ ಅಧಿಕಾರಿ ನಟರಾಜು ಎನ್ ರವರನ್ನು ಅವರ ಅನುಪಸ್ಥಿತಿಯಲ್ಲಿ ಗುಣಗಾನ ಮಾಡಿ ಗೌರವಗಳನ್ನು ಸಮರ್ಪಿಸಲಾಯಿತು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಪಿ.ಡಿ.ಓ ನಾಗೇಂದ್ರ ಮೊಗೇರ, ಕಾರ್ಯದರ್ಶಿಗಳಾದ ಮಾರುತಿ ದೇವಾಡಿಗ, ಮಂಜು ಗೌಡ, ಲೆಕ್ಕ ಸಹಾಯಕ ರಾಘವೇಂದ್ರ ಪೂಜಾರಿ ಸ್ವಾಗತಿಸಿ ವಂದಿಸಿದರು. ಪ್ರಭಾರ ಕೃಷ್ಣಕಾಂತ ನಾಯ್ಕ ಸಹಕರಿಸಿದರು.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಭಟ್ಕಳ

Exit mobile version