Follow Us On

WhatsApp Group
Big News
Trending

ಹಾಳುಬಿದ್ದಿದೆ 11ನೇ ಶತಮಾನದ ಅಪರೂಪದ ಶಿವನ ದೇವಾಲಯ : ಶಿಥಿಲಾವಸ್ಥೆಯಲ್ಲಿರುವ ಗರ್ಭಗುಡಿಯಲ್ಲಿ ಅನಾಥವಾಗಿದೆ ಶಿವಲಿಂಗ

ಇತಿಹಾಸಕಾರರ ಪ್ರಕಾರ ಈ ದೇವಸ್ಥಾನಗಳು 11-12ನೇ ಶತಮಾನದ್ದಾಗಿರಬಹುದೆಂದು ಹೇಳಲಾಗುತ್ತಿದೆ. ಹಾಗೆಯೇ ಈ ದೇವಸ್ಥಾನದ ಸುತ್ತಮುತ್ತ ಅಗ್ರಹಾರ ಹಾಗೂ ಹಿಂದೆ ಜನವಸತಿ ಇದ್ದ ಕುರುಹುಗಳಿದ್ದು ಕಲ್ಯಾಣಿ ಚಾಣುಕ್ಯರ ಕಾಲದ ಗತವೈಭವವನ್ನ ಸಾರುವಂತಿವೆ.

ಕಾರವಾರ: ಇತಿಹಾಸ ಪ್ರಸಿದ್ಧ ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವನ ಆತ್ಮಲಿಂಗವಿರುವ ಏಕೈಕ ತಾಣ ಉತ್ತರಕನ್ನಡ ಜಿಲ್ಲೆಯ ಗೋಕರ್ಣ. ಮಿರ್ಜಾನ್ ಕೋಟೆ ಸೇರಿದಂತೆ ಐತಿಹಾಸಿಕ ಕುರುಹುಗಳನ್ನ ನೆನಪಿಸುವ ತಾಣಗಳು ಜಿಲ್ಲೆಯ ಹಲವೆಡೆಗಳಲ್ಲಿ ಇವೆ. ಆದರೆ ಐತಿಹಾಸಿಕ ಮಹತ್ವ ಪಡೆದಿರುವ ಸಾಕಷ್ಟು ತಾಣಗಳು ಸೂಕ್ತ ರಕ್ಷಣೆ ಇಲ್ಲದೇ ನಶಿಸಿಹೋಗುತ್ತಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಪುರಾತನ ಕಾಲದ ಶಿವನ ದೇವಾಲಯಗಳು ಯಾರೂ ಕೇಳುವವರಿಲ್ಲದೇ ಅರಣ್ಯ ಪ್ರದೇಶದಲ್ಲೇ ಸೊರಗುತ್ತಿವೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಒಂದೆಡೆ ಗೋಡೆಗಳು ಮುರಿದುಬಿದ್ದು ಯಾರೋ ದಾಳಿ ನಡೆಸಿ ಕಿತ್ತು ಹಾಕಿದಂತೆ ಕಾಣುತ್ತಿರುವ ದೇವಸ್ಥಾನ. ಮತ್ತೊಂದೆಡೆ ಭೂಮಿಯಲ್ಲಿ ಅರ್ಧ ಹುಗಿದುಹೋದ ಪುರಾತನ ಕಾಲದ ಶಿಲಾಮಯ ನಂದಿ ವಿಗ್ರಹ .. ಇನ್ನೊಂದೆಡೆ ಶಿಥಿಲಾವಸ್ಥೆಯಲ್ಲಿರುವ ಗರ್ಭಗುಡಿಯಲ್ಲಿ ಅನಾಥವಾಗಿರುವ ಶಿವಲಿಂಗ. ಈ ದೃಶ್ಯಗಳು ಕಂಡುಬoದಿದ್ದು ಕರ್ನಾಟಕದ ಬಾರ್ಡೋಲಿ ಎಂದೇ ಪ್ರಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ತಾಲ್ಲೂಕಿನ ಮಾರುಗದ್ದೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 11ನೇ ಶತಮಾನದ್ದು ಎನ್ನುವಂತಹ ನಾಲ್ಕು ದೇವಾಲಯಗಳಿದ್ದು ಇವು ಯಾವುದೇ ರಕ್ಷಣೆ ಇಲ್ಲದೇ ಪಾಳುಬಿದ್ದು ಶಿಥಿಲಾವಸ್ಥೆ ತಲುಪಿವೆ.

11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಆಡಳಿತಾವಧಿಯಲ್ಲಿ ನಿರ್ಮಿಸಿದಂತಿರುವ ಈ ಶಿವನ ದೇವಾಲಯಗಳಲ್ಲಿ ಒಂದು ದೇವಸ್ಥಾನ ಬಾದಾಮಿಯಲ್ಲಿನ ದೇವಸ್ಥಾನದಂತೆ ಕಲಾಕೃತಿಗಳನ್ನ ಹೊಂದಿದೆ. ಈ ದೇವಸ್ಥಾನದ ಕಲ್ಲಿನ ಗೋಡೆಗಳ ಮೇಲಿನ ಕೆತ್ತನೆಗಳು ಮನೋಜ್ಞವಾಗಿದ್ದು ಕಲ್ಲುಗಳಲ್ಲಿ ಮೂಡಿರುವ ಶಿವ, ವೀರಭದ್ರ, ದುರ್ಗೆ ಸೇರಿದಂತೆ ಹಲವು ಕಲಾಕೃತಿಗಳು ಅಂದಿನ ಶಿಲ್ಪಕಲೆಯನ್ನ ಸಾರುವಂತಿವೆ.

ದೇವಸ್ಥಾನದ ಕಂಭಗಳು ಸಹ ಶಿಲಾಮಯವಾಗಿದ್ದು ಕಲ್ಯಾಣಿ ಚಾಲುಕ್ಯರ ಶೈಲಿಯ ಈ ದೇವಸ್ಥಾನ ಎಂತಹವರನ್ನೂ ಮನಸೂರೆಗೊಳ್ಳುತ್ತದೆ. ಆದರೆ ಅರಣ್ಯ ಪ್ರದೇಶದಲ್ಲಿರುವ ದೇವಾಲಯಗಳು ಮಳೆಯಿಂದಾಗಿ ಸಾಕಷ್ಟು ಹಾನಿಗೊಳಗಾಗಿದ್ದು ಸೂಕ್ತ ರಕ್ಷಣೆ ಇಲ್ಲದ್ದರಿಂದ ಐತಿಹಾಸಿಕ ಮಹತ್ವವಿರುವ ಪುರಾತನ ದೇವಸ್ಥಾನಗಳು ಜೀರ್ಣಾವಸ್ಥೆಯನ್ನ ತಲುಪಿವೆ.

ಇನ್ನು ಇತಿಹಾಸಕಾರರ ಪ್ರಕಾರ ಈ ದೇವಸ್ಥಾನಗಳು 11-12ನೇ ಶತಮಾನದ್ದಾಗಿರಬಹುದೆಂದು ಹೇಳಲಾಗುತ್ತಿದೆ. ಹಾಗೆಯೇ ಈ ದೇವಸ್ಥಾನದ ಸುತ್ತಮುತ್ತ ಅಗ್ರಹಾರ ಹಾಗೂ ಹಿಂದೆ ಜನವಸತಿ ಇದ್ದ ಕುರುಹುಗಳಿದ್ದು ಕಲ್ಯಾಣಿ ಚಾಣುಕ್ಯರ ಕಾಲದ ಗತವೈಭವವನ್ನ ಸಾರುವಂತಿವೆ. ಆದ್ರೆ ಇಷ್ಟೊಂದು ಮಹತ್ವ ಇರುವ ಈ ದೇವಸ್ಥಾನ ಈಗ ಪಾಳು ಬಿದ್ದಿದು ಪುರಾತತ್ವ ಇಲಾಖೆಯಾಗಲೀ, ಸ್ಥಳೀಯ ಆಡಳಿತವಾಗಲೀ ಇತ್ತ ಗಮನಹರಿಸುತ್ತಿಲ್ಲ. ಈ ಹಿಂದೆ 2019ರಲ್ಲಿ ಉಂಟಾದ ಪ್ರವಾಹಕ್ಕೆ ಇಲ್ಲಿನ ವಿಗ್ರಹಗಳ ಪೈಕಿ ಹಲವು ಮಣ್ಣಿನಲ್ಲಿ ಮುಚ್ಚಿಹೋಗಿವೆ.

ಹೀಗಾಗಿ ಈ ಗ್ರಾಮದ ಜನರು ಪುರಾತತ್ವ ಹಾಗೂ ಮುಜರಾಯಿ ಇಲಾಖೆ ಇವುಗಳನ್ನು ರಕ್ಷಿಸಿ ಈ ಪ್ರದೇಶವನ್ನ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಕುಗ್ರಾಮವಾಗಿರುವ ಮಾರುಗದ್ದೆ ಸಹ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಒಟ್ಟಾರೇ ಐತಿಹಾಸಿಕ ಮಹತ್ವವುಳ್ಳ ದೇವಾಲಯಗಳಾಗಿದ್ದರೂ ಸಹ ಸೂಕ್ತ ರಕ್ಷಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿರುವುದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬoಧಪಟ್ಟ ಇಲಾಖೆ ಇತ್ತ ಗಮನಹರಿಸಿ ಇತಿಹಾಸದ ಕುರುಹಾಗಿರುವ ದೇವಸ್ಥಾನಗಳನ್ನ ರಕ್ಷಿಸಿ ಜೀಣೋದ್ಧಾರಗೊಳಿಸುವ ಕೆಲಸಕ್ಕೆ ಮುಂದಾಗಬೇಕಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕಾರವಾರ

Back to top button