Follow Us On

WhatsApp Group
Big News
Trending

ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ನಿಲ್ಲಿಸಿಟ್ಟ ಬೈಕ್ ಕಳುವು: ಅತೀವೇಗವಾಗಿ ಕದ್ದ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಸ್ಕಿಡ್ ಆಗಿ ಬಿದ್ದು ಸಿಕ್ಕಬಿದ್ದ ಕಳ್ಳ!

ಸ್ನೇಹಿತನೊಡನೇ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ನೋಡನೋಡುತ್ತಿದ್ದಂತೆ ಬೈಕನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದ. ಕಳ್ಳತನ ಮಾಡಿದ್ದು, ಎಲ್ಲಿ ತನ್ನನ್ನು ಹಿಡಿಯುತ್ತಾರೊ ಎಂಬ ಭಯದಲ್ಲಿ ಅತೀವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋದಾಗ ಸ್ಕಿಡ್ ಆಗಿ ಬಿದ್ದಿದ್ದಾನೆ.

ಅಂಕೋಲಾ: ಇದೊಂದು ರೀತಿಯ ವಿಚಿತ್ರ ಪ್ರಕರಣ. ನಿಲ್ಲಿಸಿಟ್ಟಿದ್ದ ಬೈಕ್ ಅನ್ನು ಕದ್ದು ಅತೀವೇಗದಿಂದ ಚಲಾಯಿಸಿಕೊಂಡು ಹೋಗುತ್ತಿರುವ ವೇಳೆ ಸ್ಕಿಡ್ ಆಗಿ ಬಿದ್ದ ಪರಿಣಾಮ ಕಳ್ಳನೊಬ್ಬ ನಾಟಕೀಯ ರೀತಿಯಲ್ಲಿ ಸಿಕ್ಕಿಬಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬಾಳೇಗುಳಿಗೆ ತನ್ನ ಕೆಲಸದ ನಿಮಿತ್ತ ಬಂದಿದ್ದ. ಅಲ್ಲೇ ಪಕ್ಕದಲ್ಲೇ ಬೈಕ್ ನಿಲ್ಲಿಸಿ ಸ್ನೇಹಿತನೊಡನೇ ಮಾತನಾಡುತ್ತಿದ್ದ.

ಈ ವೇಳೆ, ವ್ಯಕ್ತಿಯೊಬ್ಬ ನೋಡನೋಡುತ್ತಿದ್ದಂತೆ ಬೈಕನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದ. ಕಳ್ಳತನ ಮಾಡಿದ್ದು, ಎಲ್ಲಿ ತನ್ನನ್ನು ಹಿಡಿಯುತ್ತಾರೊ ಎಂಬ ಭಯದಲ್ಲಿ ಅತೀವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋದಾಗ ಸ್ಕಿಡ್ ಆಗಿ ಬಿದ್ದಿದ್ದಾನೆ.

ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದಾಗ ಬೇಡವೇ ಬೇಡ ಎಂದು ಹಠಹಿಡಿದಿದ್ದಾನೆ. ಗಾಯ ಗಂಭೀರವಾಗಿದ್ದರಿoದ ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ಸೇರಿದ್ದಾರೆ. ಇತ್ತ ಬೈಕ್ ಕಳೆದುಕೊಂಡ ವ್ಯಕ್ತಿ ನಾರಾಯಣ ನಾಯಕ್ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೈಕ್ ನಂಬರ್ ಪರಿಶೀಲಿಸುವಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಬೈಕಿನ ನಂಬರ್ ಗೆ ತಾಳೆಯಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಬೈಕನ್ನು ಜಪ್ತಿ ಮಾಡಿದ್ದಾರೆ. ಬೈಕ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಮಂಜುನಾಥ ಕುಲಕರಣಿ , ಹುಬ್ಬಳ್ಳಿಯವನು ಎಂದು ತಿಳಿದುಬಂದಿದೆ. ಈತ ಕದ್ದ ಬೈಕ್ ಅನ್ನು ಹುಬ್ಬಳ್ಳಿಗೆ ತೆಗೆದುಕೊಂಡು ಹೋಗುತ್ತಿದ್ದ ಎಂಬ ಮಾಹಿತಿ ದೊರೆತಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಅಂಕೋಲಾ

Back to top button