ಅತಿವೇಗವಾಗಿ ಬಂದು ಕಾರಿಗೆ ಗುದ್ದಿದ ಲಾರಿ: ಕಾರಿನಲ್ಲಿದ್ದ ಓರ್ವ ಸಾವು: ಭೀಕರ ಅಪಘಾತದಲ್ಲಿ ಮೂವರು ಗಂಭೀರ

ಅಂಕೋಲಾ ಅ 6: ರಾ.ಹೆ. 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ಶುಕ್ರವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಗದಗದಿಂದ ಯಲ್ಲಾಪುರ ಅಂಕೋಲ ಮಾರ್ಗವಾಗಿ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಕಾರಿಗೆ ತಾಲೂಕಿನ ಹೆಬ್ಬುಳ ಬಳಿ ಎದುರಿನಿಂದ ಅತಿವೇಗವಾಗಿ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗದಗ ( ಪಂಚಾಕ್ಷರಿ ನಗರ )ನಿವಾಸಿ ವಸಂತ್ ಅಕ್ಕಿ (78) ಮೃತಪಟ್ಟು ಉಳಿದ ಮೂವರಿಗೆ ಗಾಯಗಳಾಗಿದೆ.ಬೇರೆ ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಲಾರಿ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಂಕೋಲಾ ತಾಲೂಕಿನ ಸರಳೆ ಬೈಲ್ ಬಳಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಲಾರಿ ಹಾಗೂ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿ , ಕಂಟೇನರ್ ವಾಹನದಲ್ಲಿದ್ದ ಸಹಾಯಕ ಚಾಲಕ ಕಲಘಟಗಿಯ ಬಸವರಾಜ್ ನಾಗಪ್ಪ ಉಮ್ಮಚಿಗಿ (19) ಮೃತಪಟ್ಟಿದ್ದಾನೆ.
ಅಪಘಾತದ ರಭಸಕ್ಕೆ ಎರಡೂ ವಾಹನದ ಮುಖಗಳು ಒಂದೇ ದಿಕ್ಕಿಗೆ ತಿರುಗಿದಂತಿದೆ. ಈ ಎರಡು ಪ್ರತ್ಯೇಕ ಪ್ರತ್ಯೇಕ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.. ಸಿಪಿಐ ಸಂತೋಷ್ ಶೆಟ್ಟಿ, ಪಿಎಸೈ ಪ್ರವೀಣ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ
ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ
- ರೆಡ್ ಅಲರ್ಟ್ ಹಿನ್ನಲೆ; ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
- ಮಂದಾರಾ ಎಲೈಟ್ಸ್ ರೀಲ್ಸ್ ಮೇಕಿಂಗ್ ಕಾಂಪಿಟೇಷನ್: 15 ಸಾವಿರ ನಗದು ಗೆಲ್ಲುವ ಸುವರ್ಣಾವಕಾಶ
- ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ದನ: ಎರಡು ತಾಸು ಬಳಿಕ ಹೊರಟ ಬಸ್
- ತೋಟದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಯುವತಿ
- ದೊಡ್ಡ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ : ಅನ್ನಸಂತರ್ಪಣೆ.